ಕ್ರಿ. ಶ ಸುಮಾರು ಐದನೆಯ ಶತಮಾನದಲ್ಲಿ ಕದಂಬ ವಂಶದ ರಾಜ ರವಿವರ್ಮನ ಶಾಸನ ಇದು. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೆಳಗುಂದಿ ಅಥವಾ ಕೆಳಗುಂದ್ಲಿ ಎನ್ನುವ ಪ್ರದೇಶದಲ್ಲಿದ್ದ ಶಾಸನ ಶಾಸನದ ಕೆಲವು ಅಕ್ಷರಗಳು ಕಾಣಿಸುತ್ತಿಲ್ಲ. ಆದರೂ ಕನ್ನಡದ ಮಟ್ಟಿಗೆ ಕದಂಬರ ಈ ಶಾಸನ ಅತ್ಯಂತ ಮಹತ್ವದ್ದು ಎನ್ನಬಹುದಾಗಿದೆ ಮೊದಲನೆಯದಾಗಿ ಇದು ಸಂಪೂರ್ಣ ಕನ್ನಡದ ಸೊಗಡನ್ನು ಹೊತ್ತಿದ್ದು ಇದು ದ್ವಿಭಾಷಾ ಶಾಸನಗಳ ಸಾಲಿನಿಂದ ದೂರ ಉಳಿದಿದೆ. ಹಾಗೆಯೇ ಇನ್ನೊಂದು ಮಹತ್ವದ ವಿಷಯ ಅಂದರೆ ಇದು ಕನ್ನಡದಲ್ಲಿನ "ಅರಸಿ" ಪದ ಮೊತ್ತ ಮೊದಲ ಬಾರಿಗೆ ಬಂದಿದೆ. ಕೆಳಗುಂದಿಯನ್ನು ಕಾಳಗುಜ್ಜೆನಿ ಅನ್ನುವ ಹೆಸರಿನಿಂದ ಕರೆದಿರಬಹುದು.
No comments:
Post a Comment