Search This Blog

Saturday 22 October 2016

ಹೆಸರು ಮಾತ್ರ ಕುಬ್ಜ ...ಸಾಹಿತ್ಯದಲ್ಲಿ ಅಮೋಘ

ಶಾಂತಿವರ್ಮ ಕದಂಬ ರಾಜರುಗಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಿಕೊಂಡಿದ್ದ ಮತ್ತು ಪಿತೃವಾಕ್ಯವನ್ನು ನೆರವೇರಿಸಿದವರಲ್ಲಿ ಪ್ರಮುಖನಾಗಿದ್ದ. ಕಾಕುತ್ಸವರ್ಮನ ಕಾಲದಲ್ಲಿ ಸ್ತಾನಗುಂದೂರಿನಲ್ಲಿ (ತಾಳಗುಂದ) ನಿರ್ಮಿಸಿದ ಕೆರೆಯ ನೆನಪಿಗೆ ಶಾಂತಿವರ್ಮ ಬರೆಸಿದ ಶಾಸನ ಕಾವ್ಯ ಪ್ರಪಂಚದ ಅದ್ಭುತಗಳಲ್ಲೊಂದು. ಕುಬ್ಜನೆನ್ನುವ ಕವಿಯನ್ನು ಬಳಸಿಕೊಂಡು ತನ್ನ ಹಿರಿಯರೆಲ್ಲರ ಕಾರ್ಯಗಳನ್ನು ಸ್ಮರಿಸಿದ ಶಾಸನ ರಚನೆಯಲ್ಲಿ ಕುಬ್ಜನು ೧ನೇ ಶ್ಲೋಕದಿಂದ ೨೪ನೇ ಶ್ಲೋಕದ ತನಕ ಮಾತ್ರಾ ಸಮಕ ವಿಶೇಷ ಅಥವಾ ಮಿಶ್ರ ಗಣ ಗೀತಿಕಾ ಛಂದಸ್ಸನ್ನು ಬಳಸಿಕೊಂಡಿದ್ದರೆ, ೨೫ ಮತ್ತು ೨೬ ಪುಷ್ಪಗೀತಿಕಾ ಉಪಯೋಗಿಸಿದ್ದಾನೆ, ಹಾಗೆಯೇ ಶಾರ್ದೂಲವಿಕ್ರೀಡಿತಾ, ವಸಂತ ತಿಲಕ, ಮಂದಾಕ್ರಾಂತಾ ಮತ್ತು ಇನ್ನಿತರ ಛಂದಸ್ಸುಗಳನ್ನು ಬಳಸಿಕೊಂಡಿದ್ದಾನೆ. ಕವಿಯೊಬ್ಬ ಸಾಹಿತ್ಯದ ಆಳಕ್ಕಿಳಿದರೆ ಹೇಗೆ ಕೃತಿ ರಚಿಸುತ್ತಾನೆ ಎನ್ನುವುದು ಕುಬ್ಜನಿಂದ ತಿಳಿಯುತ್ತದೆ. ಕುಬ್ಜನು ರಾಜನ ಆಜ್ಞೆಯನ್ನು ಕಾವ್ಯಾತ್ಮಕವಾಗಿ ವಿಬುಧಸಂಘಮೌಲಿ ಎನ್ನುವುದಾಗಿ ೮ನೇ ಸಾಲಿನಲ್ಲಿ ಹೇಳಿದ್ದಲ್ಲದೇ ೯ನೇ ಸಾಲಿನಲ್ಲಿ ಶ್ರುತಿ ಪಥ ನಿಪುಣ ಕವಿಃ ಎಂದಿದ್ದಾನೆ. ೧೨ನೇ ಸಾಲಿನಲ್ಲಿ ವಸಂತ ತಿಲಕಾ ಛಂದಸ್ಸನ್ನು ಬಳಸಿ ಸಂಗೀತ ನೃತ್ಯವನ್ನು ಕೊಂಡಾಡಿದ್ದಾನೆ. ಕೊನೆಯಲ್ಲಿ ತಾನು ಕುಬ್ಜನೆನ್ನುವ ಕವಿ ಈ ಶಿಲೆಯನ್ನು ಕಾವ್ಯಾತ್ಮಕವಾಗಿ ಕಾಕುಸ್ತವರ್ಮನ ಮಗನಾದ ಶಾಂತಿವರ್ಮಮಹಾರಾಜನ ಆಜ್ಞೆಯನ್ನು ಬರೆದಿರುವೆ ಎಂದಿದ್ದಾನೆ. ಮಯೂರವರ್ಮ, ಚುಟು ಶಾತಕರ್ಣಿಮುಂತಾದವರನ್ನು ಸ್ಮರಿಸಿದ ಶಾಸನ ಇದಂಬ್ರಾಹ್ಮಂ ಇದಂ ಕ್ಶಾತ್ರಂ ಎನ್ನುವುದಕ್ಕೆ ಒಂದು ನಿದರ್ಶನ ಒದಗಿಸುತ್ತದೆ.



£Á£Á «zsÀ zÀæ«t¸ÁgÀ ¸ÀªÀÄÄZÀÑÀAiÉÄõÀÄ ªÀÄvÀÛ ¢é¥ÉãÀÝç ªÀÄzÀªÁ¹vÀ UÉÆÃ¥ÀÄgÉõÀÄ
¸ÀAVÃvÀ ªÀ®ÄÎ ¤£ÁzÉõÀÄ UÀȺÉõÀÄ AiÀĸÀå  ®PÀÁëöäöåYΣÁ zsÀÈwªÀÄwà ¸ÀÄagÀA ZÀgÉêÉÄÃ||
UÀÄ¥ÁÛ¢ ¥ÁwÜðªÀ PÀįÁªÀÄÄâgÀĺÀ ¸ÀܯÁ¤ ¸ÉßúÁzÀgÀ ¥ÀætAiÀÄ ¸ÀªÀÄãçªÀÄ PÉøÀgÁtÂÀ
²æà ªÀÄ£ÀÛöå£ÉÃPÀ £ÀÈ¥À µÀlàzÀ ¸ÉëvÁ¤ AiÉÆèÉÆÃzsÀAiÀÄzÀÄÝ»vÀȢâüw©ü£ÀÈð¥ÁPÀÌðB ||




Monday 17 October 2016

ಆರ್ಯಪುರದ ನಭೂತೋ ನ ಭವಿಷ್ಯತಿ

ಸುಮಾರು ಕ್ರಿ ಶ ಏಳನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಹುಚ್ಚಪ್ಪಯ್ಯ ಗುಡಿ ಅಯ್ಯಾವೊಳೆ ಅಥವಾ ಐಹೊಳೆಯ ಗತ ಇತಿಹಾಸದ ಕುರುಹಾಗಿ ಇಂದಿಗೂ ಕಾಣಸಿಗುವಲ್ಲಿ ಪ್ರಮುಖವಾಗಿರುವಂತಹದ್ದು. ಆರ್ಯಪುರವೆಂದು ಸಂಸ್ಕೃತದಲ್ಲಿ ಕರೆಸಿಕೊಂಡ ಈ ಊರು ಅನೇಕ ಶಿಲ್ಪಿಗಳ ಆಶ್ರಯ ತಾಣ ವಾಗಿತ್ತು. ನರಸೊಬ್ಬ ಎನ್ನುವ ಪ್ರಮುಖ ಶಿಲ್ಪಿಯೊಬ್ಬ ಆಕಾಲದಲ್ಲಿನ ಅರಮನೆಯ ವಾಸ್ತುಶಾಸ್ತ್ರದಲ್ಲಿ ಅತ್ಯಂತ ಪ್ರಸಿದ್ಧ ನಾಗಿದ್ದುದು ಶಾಸನ ಒಂದರಲ್ಲಿ ಆತನನ್ನು ನಭೂತೋ ನ ಭವಿಷ್ಯತಿ ಎನ್ನುವುದಾಗಿ ಹೊಗಳಿದ್ದರಿಂದ ತಿಳಿದು ಬರುತ್ತದೆ. ಐಹೊಳೆಯ ಅನೇಕ ಕಡೆಗಳಲ್ಲಿ ಶಿಲ್ಪಿಗಳನ್ನು ಅತಿಶಯವಾಗಿ ಹೊಗಳಿರುವುದು ಹೊಗಳಿಸಿಕೊಂಡಿರುವುದು ಕಾಣ ಸಿಗುತ್ತದೆ.




Friday 7 October 2016

ಪ್ರಾಚೀನದಿಂದ ಅರ್ವಾಚೀನದೆಡೆಗೆ

ಸುಮಾರು ಕ್ರಿ. ಶ ೭ ನೇ ಶತಮಾನದಿಂದ ನಮಗೆ ಕಾಣಿಸಿಕೊಳ್ಳುವ ಸಾಂತರ ವಂಶದ ರಾಜರು, ಶಿವಮೊಗ್ಗ ಮತ್ತು ಈಗಿನ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚು ಪ್ರಸಿದ್ಧರಾಗಿದ್ದರು. ಕಲೆ ವಾಸ್ತು ಶಿಲ್ಪ ಹಾಗೂ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ಕೊಟ್ಟವರು. ಅವರ ಕೊಡುಗೆಗಳಲ್ಲಿ ಶಿವಮೊಗ್ಗ ಜಿಲ್ಲೆಯ ಹೊಂಬುಜ ಅಥವ ಇಂದಿನ ಹುಂಚದಿಂದ ಬಂದ ಸಾಂತರ ಪ್ರಮುಖ ಆಕರ್ಷಣೀಯ ದೇಗುಲಗಳಲ್ಲಿ ಹೊಸಗುಂದ ಪ್ರಮುಖವಾದದ್ದು. ಸಾಗರ ತಾಲೂಕಿನಲ್ಲಿ ಪ್ರಕೃತಿಯ ಹಸಿರು ಸೊಬಗಿನಲ್ಲಿ ಕಲೆಯನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾ ಇರುವ ರಮಣೀಯ ಕ್ಷೇತ್ರಗಳಲ್ಲಿ ಒಂದು. ಶಿಲ್ಪ ಕಲೆಯ ಜೊತೆಗೆ ಅತೀ ಅಪರೂಪವಾದ ಮಿಥುನಶಿಲ್ಪವನ್ನು ಹೊಂದಿರುವ ದೇವಾಲಯಗಳಲ್ಲಿ ಹೊಸಗುಂದ ಪ್ರಮುಖವಾದದ್ದು. ಇತ್ತೀಚೆಗೆ ಇದು ನವೀಕರಣಗೊಂಡಿದ್ದರೂ ಪ್ರಾಚೀನತೆಯನ್ನು ಕಳೆದುಕೊಳ್ಳದೇ ಅರ್ವಾಚೀನ ಜಗತ್ತಿನಲ್ಲಿ ನಿಂತಿದೆ.

Thursday 6 October 2016

ಕಣಜದ ಬರಹ - ಲಿಪಿ ಸಾಹಿತ್ಯ



ಕಾ ಚಿಂತಾ ಮರಣೇ.......................ರಣೇ

ಯುದ್ಧದಲ್ಲಿನ ಜಯದಿಂದ ಜಯಲಕ್ಷ್ಮಿ ಲಭಿಸಿ ಅಭಿಮಾನಿಗಳ ಪ್ರಜೆಗಳ ನಾಗರೀಕರ ಪ್ರಶಂಸೆಗೆ ಪಾತ್ರರಾಗುತ್ತಾರೆ. ವೀರಾವೇಶದಿಂದ ಹೋರಾಡಿ ವೀರ ಮರಣವನ್ನು ಹೊಂದಿದರೆ ಸ್ವರ್ಗಪ್ರಾಪಿಯಾಗುತ್ತದೆ. ಸ್ವರ್ಗದ ಜಯಾಂಗನೆ ಒಳಿಯುತ್ತಾಳೆ. ದೇಶಕ್ಕಾಗಿ ಪ್ರಾಣ ತೆತ್ತು ದೇಶಭಿಮಾನವನ್ನು ಹೆಚ್ಚಿಸಿದಂತಾಗುತ್ತದೆ. ಈ ನಶ್ವರವಾದ ಶರೀರಕ್ಕಾಗಿ (ಒಂದು ಕ್ಷಣದಲ್ಲಿ ಧ್ವಂಸವಾಗುವ) ಈ ದೇಹಕ್ಕಾಗಿ ರಣಾಂಗಣದಲ್ಲಿ ಮರುಕ ಪಡಬಾರದು ಆಶೆಯನ್ನು ಹೊಂದಿ ರಣಾಂಗಣದಿಂದ ಹೇಡಿಯಂತೆ ಹಿಂದಿರುಗ ಬಾರದೆನ್ನುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳಲ್ಲಿ ಶಾಸನಾಂತ್ಯದಲ್ಲಿ ಹಾಕಲಾಗುತ್ತಿತ್ತು. ಆ ಕಾಲಕ್ಕೆ ಸಾರ್ವಜನಿಕ ಸ್ಥಳ ಎನ್ನುವುದು ದೇವಾಲಯಗಳಾಗಿತ್ತು. ಕಲೆ, ಸಾಹಿತ್ಯ, ಆಚಾರ ವಿಚಾರಗಳ ಧಾಮವಾಗಿದ್ದ ದೇವಾಲಯಗಳಲ್ಲಿ ಶಾಸನ ಬರೆಸುವ ರೂಢಿ ಬಳಕೆಗೆ ಬಂದಿತ್ತು.