Search This Blog

Wednesday 29 November 2017

ಯಶೋವರ್ಮ ದೇವ ಭಾರತದ ಭಾರತೀಯರ ಅಸ್ತಿತ್ವದ ಕುರುಹು.


ಸುಮಾರು 9ನೆಯ ಶತಮಾನದಲ್ಲಿ ಪ್ರತೀಹಾರ ವಂಶಸ್ಥರ ಆಳ್ವಿಕೆಯ ನಂತರ ಉತ್ತರ ಭಾರತದ ಮಧ್ಯಭಾಗದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ಒಂದು ರಾಜಮನೆತನದವರು ಎಂದರೆ ಚಂಡೇಲರು. ಇವರು ಬುಂದೇಲಖಂಡ ಎನ್ನುವ ಪ್ರದೇಶದವರು. ಚಂದ್ರವಂಶಕ್ಕೆ ಸೇರಿದ ಋಷಿ ಚಂದ್ರಾತ್ರೇಯನಿಂದ ಜನಿಸಿದವರೆಂದು ಚಂದೇಲರು ಹೇಳಿಕೊಂಡಿದ್ದಾರೆ. 36 ಪ್ರಸಿದ್ಧ ರಾಜವಂಶಗಳಲ್ಲಿ ಚಂಡೇಲರದೂ ಒಂದು-ಎಂದು ಆ ವಂಶಸ್ಥರ ಆಸ್ಥಾನ ಕವಿಗಳು ಹೇಳಿದ್ದಾರೆ. ಅವರ ಅತಿಪ್ರಾಚೀನವೆನಿಸಿದ, 954ನೇ ಇಸವಿಯ ಶಾಸನದಲ್ಲಿ ಅರಸರು ಚಂದ್ರಾತ್ರೇಯ ವಂಶದವರೆಂದು ಬಣ್ಣಿಸಿದೆ. ಸು.1098 ಕೀರ್ತಿವರ್ಮನ ದೇವಗಢದ ಶಾಸನ ಒಂದರಲ್ಲಿ ಚಂದೆಲ್ಲ ಎಂಬ ಹೆಸರೂ ಸಹ ಕಾಣಸಿಗುತ್ತದೆ. ಚಂಡೇರ ಆಳ್ವಿಕೆ ಒಳಪಟ್ಟ ಪ್ರದೇಶವನ್ನು ಜೇಜಭುಕ್ತಿ, ಜೇಜಕಭುಕ್ತಿ, ಜೇಜಕಭುಕ್ತಿ ಮಂಡಲ ಎಂಬ ಮೂರು ಹೆಸರುಗಳಲ್ಲಿ ಶಾಸನಗಳಲ್ಲಿ ಹೇಳಲಾಗಿದೆ. ಇದು ಕ್ರಮೇಣ ಅನಂತರ ಬುಂದೇಲ್ ಖಂಡವೆನಿಸಿಕೊಂಡಿತು. 10ನೆಯ ಶತಮಾನದಿಂದ 13ನೆಯ ಶತಮಾನದವರೆಗೆ ಇವರ ರಾಜ್ಯ ಖಜುರಾಹೊ, ಕೌಲಂಜರ, ಮಹೊಬಾ ಹಾಗೂ ಅಜಗಢಗಳನ್ನೊಳಗೊಂಡಿತ್ತು. ಸು. 9ನೆಯ ಶತಮಾನದ ಮೊದಲಾರ್ಧಭಾಗದಲ್ಲಿ ನನ್ನುಕ ಚಂಡೇಲನೆಂಬವನು ಖಜುರಾಹೊ ಎಂಬಲ್ಲಿ ಚಂಡೇಲರಾಜ್ಯದ ಸ್ಥಾಪನೆ ಮಾಡಿದ. ಚಂದ್ರವರ್ಮನೆಂಬ ಬಿರುದನ್ನು ಹೊಂದಿದ್ದ ಈತ ಪ್ರತೀಹಾರ ನಾಗಭಟನ ಸಾಮಂತನಾಗಿ ರಾಜ್ಯಭಾರ ಮಾಡಿದ. ಈತನ ಅನಂತರ ಅಧಿಕಾರಕ್ಕೆ ಬಂದ ವಾಕ್ಪತಿರಾಜ, ಆತನ ಇಬ್ಬರು ಮಕ್ಕಳಾದ ಜಯಶಕ್ತಿ ಮತ್ತು ವಿಜಯಶಕ್ತಿ, ವಿಜಯಶಕ್ತಿಯ ಮಗ ರಾಹಿಲ-ಇವರು ಪ್ರತೀಹಾರರಿಗೆ ಸಾಮಂತರಾಗಿ ಆಳುತ್ತಿದ್ದರು. ರಾಹಿಲನ ಮಗನೇ ಹರ್ಷ.
ಹರ್ಷ : - ಸುಮಾರು ೯೦೦ ರಿಂದ ೯೨೫ ತನಕ ರಾಜ್ಯವಾಳಿದ ಹರ್ಷನ ಕಾಲದಲ್ಲಿ ಚಂಡೇ ರಾಜ್ಯವು ಮಹಾನ್ ಶಕ್ತಿಯಾಗಿ ಬೆಳೆಯಿತು. ಅದೇ ಕಾಲದಲ್ಲಿ ರಾಷ್ಟ್ರಕೂಟರ 3ನೆಯ ಇಂದ್ರನಿಂದ ಸ್ಥಾನ ಪಲ್ಲಟಗೊಂಡು ಸ್ಥಾನಚ್ಯುತನಾದ ಪ್ರತೀಹಾರವಂಶದ ಮಹೀಪಾಲ ತನ್ನ ಸಿಂಹಾಸನವನ್ನು ಪುನಃ ಪಡೆದುಕೊಳ್ಳಲು ಚಂಡೇಲರ ಹರ್ಷ ಸಹಾಯ ಮಾಡಿದ.
ಯಶೋವರ್ಮ ; - ಹರ್ಷನ ಮಗನೇ ಯಶೋವರ್ಮ. ಈತ ಕಾಲದಲ್ಲಿ ಪ್ರತೀಹಾರರು ತಮ್ಮೆಲ್ಲ ಶಕ್ತಿಯನ್ನೂ ಕಳೆದುಕೊಂಡು ಹೆಸರಿಗೆ ಮಾತ್ರ ಅರಸರಾಗಿ ಉಳಿದಿದ್ದರು. ಇದೇ ಸಮಯದಲ್ಲಿ ಈ ಅವಕಾಶವನ್ನು ಬಳಸಿಕೊಳ್ಳಲು ರಾಷ್ಟ್ರಕೂಟ ಮುಮ್ಮಡಿ ಕೃಷ್ಣನಿಂದ ಇನ್ನೊಮ್ಮೆ ಪ್ರತೀಹಾರ ರಾಜ್ಯವನ್ನು ಹಿಂದಕ್ಕೆ ಪಡೆಯುವ ಸಂದರ್ಭದಲ್ಲಿ ಯಶೋವರ್ಮನು ಕಾಲಂಜರ ಮುಂತಾದ ಕೋಟೆಗಳನ್ನು ತನ್ನ ಆಳ್ವಿಕೆಗೆ ಒಳಪಡಿಸಿಕೊಂಡ. ಇದಲ್ಲದೆ ಈತ ಕಳಚುರಿ ವಂಶದ ಯುವರಾಜದೇವನನ್ನು, ಪರಮಾರ ಮನೆತನದ ಸೀಯಕನನ್ನು ಮತ್ತು ಬಂಗಾಲದ ಪಾಲಮನೆತನದ ವಿಗ್ರಹಪಾಲನನ್ನು ಸೋಲಿಸಿ ತನ್ನ ಕೀರ್ತಿಯನ್ನು ಇಮ್ಮಡಿಗೊಳಿಸಿಕೊಂಡ. ಯಶೋವರ್ಮ ಒಬ್ಬ ದಕ್ಷ ಸೇನಾಪತಿಯಾಗಿದ್ದಂತೆ ದೈವಭಕ್ತನೂ ಆಗಿದ್ದ. ಇವನ ಕಾಲದಲ್ಲಿ ಕಟ್ಟಲು ಆರಂಭಿಸಲಾದ ಖಜುರಾಹೋದ ಚತುರ್ಭುಜ ದೇವಾಲಯ ಈತನ ನಂತರದ ಧಂಗನ ಆಳ್ವಿಕೆಯ ಕಾಲದಲ್ಲಿ ಪುರ್ಣಗೊಂಡಿತು.ಈತನ ಕಾಲದಲ್ಲಿದ್ದ ಮಾಧವ ಎನ್ನುವ ಕವಿ ಸಮ್ಸ್ಕೃತದ ದೊಡ್ಡ ಕವಿಯಾಗಿದ್ದ. ಈತನಿಗೆ ಯಶೋವರ್ಮನ ಮಗ ದಂಗನು ಪ್ರಶಸ್ತಿಯನ್ನು ನೀಡುತ್ತಾನೆ ಅದನ್ನು ಆತ ಖಜರಾಹೋದ ದೇವಾಲಯದ ಶಾಸನದಲ್ಲಿ ಹಾಕಿಸಿದ್ದಾನೆ .
"ಯಸ್ತ್ಯಾಗ ವಿಕ್ರಮ ವಿವೇಕ ಕಲಾ ವಿಲಾಸ ಪ್ರಜ್ಞಾಪ್ರತಾಪ ವಿಭವ ಪ್ರಭವಶ್ಚರಿತ್ರಾತ್ ಚಕ್ರೇ ಕೃತೀ
ಸುಮನಸಾಂ ಮನಸಾಮಕಸ್ಮಾದಸ್ಮಾದಕಾಲ ಕಲಿಕಾಲ ವಿರಾಮ ಶಂಕಾಂ
ಶಬ್ದಾನುಶಾಸನ ವಿದಾಪಿತ್ರಮಾನ್ತ್ರ್ಯ ತ್ತ ದದ್ದೇನ ಮಾದವ ಕವಿಃ ಸ ಇಮಾಂ ಪ್ರಶಸ್ತಿಂ
ಯಸ್ಯಾಮಲಂಕವಿ ಯಶಃ ಕೃತಿನಃ ಕಯಾಸು ರೋಮಾಂಚ ಕಂಚಕ ಜುಷಃ ಪರಿಕೀರ್ತಯನ್ತೀ
ಸಂಸ್ಕೃತ ಭಾಷಾ ವಿದುಷಾ ಜಯಗುಣ ಪುತ್ರೇಣ ಕೌತುಕಾ ಲಿಖಿತಾ" ಎನ್ನುವುದಾಗಿ ಶಾಸನವನ್ನು ಹಾಕಿಸುತ್ತಾನೆ.
ಯಶೋವರ್ಮನ ಮಗನಾದ ಧಂಗ ಕೂಡಾ ಚಂದೇಲರ ವಂಶದ ಪ್ರಸಿದ್ಧ ಅರಸರಲ್ಲಿ ಒಬ್ಬನೆಂದು ಪರಿಗಣಿಸಲ್ಪಟ್ಟಿದ್ದಾನೆ. ಇದೇ ಯಶೋವರ್ಮನ

ಇಂತಹ ಒಂದು ಪ್ರಸಿದ್ಧ ಮನೆತನ ರಾಜನ ಆಳ್ವಿಕೆ ಕಂಡ ಈ ಭೂಮಿಗೆ ಅದ್ಯಾವ ಶಪವೋ ತಿಳಿಯುತ್ತಿಲ್ಲ ಚಂಡೇಲ ವಂಶದ ಕಾಲದಲ್ಲಿಯೇ ಭವಭೂತಿ ವಾಕ್ಪತಿಯಂತಹ ಅನೇಕ ದೊಡ್ದ ದೊಡ್ಡ ಕವಿಗಳು ಉದಿಸಿಹೋದರು. ಉತ್ತರರಾಮಚರಿತದಂತಹ ಕೃತಿಗಳು ಹೊರಬಂದವು. ಆದರೆ ಅಂತಹ ಉಚ್ಚ ವಂ<ಶದ ಅವನತಿಯಾಗಿದ್ದು ದುಷ್ಟ ಮ್ಲೇಚ್ಚ ಮತಾಂಧ ಅಲ್ಲಾವುದ್ದೀನ್ ಖಿಲ್ಜಿ ಎನ್ನುವ ನಾಮರ್ಧನಿಂದ. ಭಾರತದ ಬಾಹ್ಯ ಪ್ರಪಂಚಕ್ಕೆ ಎಷ್ಟೇ ಹೊಡೆತಕೊಟ್ಟರೂ ಇಂದಿಗೂ ಭಾರತೀಯರಲ್ಲಿ ಭಾರತೀಯತೆ ಉಳಿದುಕೊಂಡಿರುವುದು ಆಗಿಹೋದ ಇಂತಹ ಮಹಾನ್ ವಂಸಸ್ಥರಾದ ಚಂಡೇಲ, ಪಾರಾಮಾರ ಮುಂತಾದವರಿಂದ.  

Monday 27 November 2017

ಶ್ರೀವಿಜಯ ಪ್ರಭೂತ ಮುದಮಂ ತನಗಾಗಿಸಿದೊಂ ಕವೀಶ್ವರಂ – ಆಲಂಕಾರಿಕ ಶ್ರೀವಿಜಯ. - ಸದ್ಯೋಜಾತ ಭಟ್ಟ

 

ಸುಮಾರು ಹತ್ತನೆಯ ಶತಮಾನದಲ್ಲಿ ರಾಷ್ಟ್ರಕೂಟರ ನಿತ್ಯವರ್ಷನು ಕಡಪ ಜಿಲ್ಲೆಯ ಜಮ್ಮಲಮಡುಗುವಿನ ದಾನವುಲಪಾಡು ಎನ್ನುವ ಊರಿನಲ್ಲಿ ಒಂದು ಕನ್ನಡ ಲಿಪಿಯಲ್ಲಿ, ಕನ್ನಡದ ಶಾಸನ ಬರೆಸುತ್ತಾನೆ. ಇದು ಆಲಂಕಾರಿಕ ಮಾರ್ಗಕಾರ ಕವಿರಾಜಮಾರ್ಗದ ಕರ್ತೃ ಶ್ರೀವಿಜಯನ ಕುರಿತಾಗಿ ಉಲ್ಲೇಖವಿರುವ ಇರುವ ಮೊದಲ ಕನ್ನಡಶಾಸನ. ಅನುಪಮ ಕವಿ, ಮಹಾದಂಡನಾಯಕ ಎಂದು ಶ್ರೀವಿಜಯನನ್ನು ಉಲ್ಲೇಖಿಸುವ ಈ ಶಾಸನ ಅನುಪಮಕವಿ ಶ್ರೀವಿಜಯನ ಸೇನಬೋವ ಗುಣವರ್ಮನು ಬರೆದದ್ದು, ಈ ಶಾಸನದ ಮಹತ್ವ ಎಂದರೆ ಸುಮಾರು 8 ಬಾರಿ ಶ್ರೀವಿಜಯನನ್ನು ಉಲ್ಲೇಖಿಸಲಾಗಿದೆ. 8 ಮತ್ತು 9ನೇ ಸಾಲಿನಲ್ಲಿ ಅನೂನ ಸುಖಾಸ್ಪದಮನೞ್ತಿಯೊಳ್ ಶ್ರೀವಿಜಯಂಎಂದು ಮೊದಲ ಉಲ್ಲೇಖ. 17 – 18 ನೇ ಸಾಲಿನಲ್ಲಿ, “ಶ್ರೀಗೊಳ್ಗಣ್ಡಂ ಶ್ರೀದಣ್ಡನಾಯಕಂ ಶ್ರೀವಿಜಯಂಎಂದು ಶ್ರೀ ವಿಜಯನನ್ನು ದಂಡನಾಯಕ ಎನ್ನಲಾಗಿದೆ. 22ನೇ ಸಾಲಿನಲ್ಲಿ ಶ್ರೀ ವಿಜಯನನ್ನು. ಶ್ರೀವಿಜಯಂ ಅನುಪಮ ಕವಿಎಂದು ಬಣ್ಣಿಸಲಾಗಿದೆ. ಪುನಃ 30 ಮತ್ತು 31ನೇ ಸಾಲಿನಲ್ಲಿ ದಣ್ಡನಾಯಕಂ ಶ್ರೀ ವಿಜಯಂಎನ್ನಲಾಗಿದೆ. 38ನೇ ಸಾಲಿನಿಂದ 41ರ ವರೆಗೆ ಕರಮರಿದು ರಣದೊಳನುಪಮಕವಿಯಾ ಕುಪಿತವತಿ ಶ್ರೀ ವಿಜಯೇಎಂದು ಅನುಪಮ ಕವಿಯಾಗಿ ವರ್ಣಿಸಿದ್ದಾರೆ. 59ನೇ ಸಾಲಿನಿಂದ 65ನೇ ಸಾಲಿನ ತನಕ 2 ಸಲ ಶ್ರೀವಿಜಯನನ್ನು ಸ್ಮರಿಸಲಾಗಿದೆ. ಶ್ರೀವಿಜಯಾ ಚತುರುದಧಿ ವಲಯವಲಯಿತ ವಸುನ್ಧರಾಮಿನ್ದ್ರಶಾಸನಾತ್ಸಂರಕ್ಷನ್ ಶ್ರೀವಿಜಯ ದಣ್ಡನಾಯಕ ಜೀವಚಿರಂಎಂದು ಶಾಸನ ವಾಕ್ಯವನ್ನು ಕೊನೆಗೊಳಿಸಲಾಗಿದೆ.
ಕನ್ನಡದೊಳು ಚಂಪೂಕಾವ್ಯವ ನೆಱೆ ಪೇೞ್ದ | ಸನ್ನುತ ಸತ್ಕವೀಶ್ವರರಹೆಸರನ್ನು ಹೇಳುತ್ತೇನೆ ಎಂದು ಆರಂಭಿಸಿ ದೇವಚಂದ್ರ ಪ್ರಭರನ್ನು ಕೊಂಡಾಡಿದ | ಶ್ರೀ ವಿಜಯರ . . .ಎನ್ನುವುದಾಗಿ ಸುಮಾರು 1508ನೇ ಇಸವಿಯಲ್ಲಿದ್ದ ಮಂಗರಸನು ತನ್ನ ನೇಮಿಜಿನೇಶ ಸಂಗತಿಯಲ್ಲಿ ಕನ್ನಡಭಾಷೆಯಲ್ಲಿ ಚಂದ್ರಪ್ರಭಪುರಾಣವನ್ನು ಚಂಪೂ ಶೈಲಿಯಲ್ಲಿ ಬರೆದ ಎಂದು ಹೇಳಿಕೊಂಡಿದ್ದಾನೆ.(ಈ ಮಂಗರಸನೇ ಸೂಪಶಾಸ್ತ್ರ(ಪಾಕ ಶಾಸ್ತ್ರ ಗ್ರಂಥ) ಬರೆದ ಎಂದು ಹೇಳಲಾಗುತ್ತದೆ.) ಶ್ರೀ ವಿಜಯ ಒಬ್ಬ ಜೈನ ಕವಿ. ಸುಮಾರು 1550 ಇಸವಿಯಲ್ಲಿ ಜೀವಿಸಿದ್ದ ಪಿರಿಯಾ ಪಟ್ಟಣದ ದೊಡ್ಡಯ್ಯನು ತನ್ನ ಚಂದ್ರಪ್ರಭಾಸಾಂಗತ್ಯದಲ್ಲಿ ಚಂದ್ರಪ್ರಭ ಪುರಾಣವ ಪೇೞ್ದ ವಿಜಯ ಕವೀಂದ್ರಎಂದು ಶ್ರೀ ವಿಜಯನನ್ನು ಸ್ಮರಿಸಿದ್ದಾನೆ.
ಶ್ರೀವಿಜಯ ಕವಿಮಾರ್ಗಂ | ಭಾವಿಪ ಕವಿಜನದ ಮನಕೆ ಕನ್ನಡಿಯುಂಕೆ | ಯ್ದೀವಿಗೆಯುಮಾದುವದಱಿಂ | ಶ್ರೀ ವಿಜಯರಂ ದೇವರವರನೇ ವಣ್ಣಿಪುದೋ ||” ಎನ್ನುವುದಾಗಿ ಶ್ರೀ ವಿಜಯನನ್ನು ದುರ್ಗಸಿಂಹನು ೧೦೨೫ರಲ್ಲಿ ತನ್ನ ಪಂಚತಂತ್ರದಲ್ಲಿ ಹೊಗಳುತ್ತಾನೆ. ವೈಯ್ಯಾಕರಣಿ ಕೇಶಿರಾಜನು ಶಬ್ದಮಣಿ ದರ್ಪಣದಲ್ಲಿ ಸುಮಾರ್ಗಮಿದಱೊಳೆ ಲಕ್ಷ್ಯಂಎಂದು ಹೇಳಿದ್ದಾನೆ. ಪ್ರಾಗಾಸೀತ್ ಸುಚಿರಾಭಿಯೋಗ ಬಲತೋ ನೀತಂ ಪರಾಮುನ್ನತಿಂ ಪ್ರಾಯಃ ಶ್ರೀ ವಿಜಯೇ ತದೇತದಖಿಲಂ ತತ್ವೀರಿಕಾಯಾಂ ಸ್ಥಿತೇ ಸಂಕ್ರಾನ್ತಂ ಕಥಮನ್ಯತಾನತಿ ಚರಾದ್ವಿದ್ಯೇದೃಗೀದೃಕ್ತಪಃ ||” ಎನ್ನುವುದಾಗಿ ಶ್ರವಣಬೆಳಗೊಳದಲ್ಲಿರುವ ಬಿ ಎಲ್ ರೈಸ್ ಸಂಗ್ರಹಿಸಿದ ಎಪಿಗ್ರಾಫಿಯಾ ಕರ್ನಾಟಕದ ಶ್ರವಣಬೆಳಗೊಳ 67ನೇ ಸಂಖ್ಯೆಯ ಶಾಸನದಲ್ಲಿ ಶ್ರೀವಿಜಯನೆನ್ನುವವನೊಬ್ಬ ಗಂಗರಾಜನಿಗೆ ಗುರುವಾಗಿದ್ದ. ಆತನಲ್ಲಿ ಹೇಮಸೇನ ಮುನಿಯ ತಪಸ್ಸಿನ ಫಲವು ಶ್ರೀವಿಜಯನಲ್ಲಿ ಸೇರಿಕೊಂಡಿತು ಎನ್ನುವುದಾಗಿಯೂ ಉಲ್ಲೇಖಿಸಿದ್ದಾರೆ. 

ಶ್ರೀವಿಜಯ ಕನ್ನಡಕ್ಕೊಬ್ಬ ಮಾರ್ಗಕಾರನಾಗಿ, ಅಲಂಕಾರ ಶಾಸ್ತ್ರಕ್ಕೆ ಮಾರ್ಗದರ್ಶಕನಾಗಿದ್ದದು ನಿಜ. ಈತನು ನೃಪತುಂಗನ ಆಸ್ಥಾನದಲ್ಲಿ ಸಭಾಸದನಾಗಿದ್ದಂತೆ ನೃಪತುಂಗ ರಾಜನ ಹೆಸರಿನಲ್ಲಿ ಅಲಂಕಾರ ಗ್ರಂಥವಾದ ಕವಿರಾಜ ಮಾರ್ಗವನ್ನು ರಚಿಸಿದ್ದನೆನ್ನಬಹುದಾಗಿದೆ. ದುರ್ಗಸಿಂಗ ಮತ್ತು ಕೇಶೀರಾಜನು ಶ್ರೀವಿಜಯನನ್ನು ಹೋಗಳಿರುವುದು ಗಮನಿಸಿದರೆ ಶ್ರೀವಿಜಯ ಪ್ರೌಢ ಕವಿಯಾಗಿದ್ದ ಎನ್ನ ಬಹುದಾಗಿದೆ. ಆದರೆ ಈತ ಬರೆದ ಚಂದ್ರಪ್ರಭ ಚಂಪೂ ಈ ವರೆಗೂ ಲಭ್ಯವಾಗದೇ ಇರುವುದು ಕನ್ನಡ ಭಾಷೆಗೆ ತುಂಬಲಾರದ ನಷ್ಟ ಎನ್ನಬಹುದು. ಅಲ್ಲದೇ ಈತನು ಚಂದ್ರಪ್ರಭಚಂಪು ವಲ್ಲದೇ ಮತ್ತಿನ್ನೇನಾದರೂ ಬರೆದಿದ್ದಾನೋ ಎನ್ನುವುದು ಎಲ್ಲಿಯೂ ತಿಳಿದು ಬರುವುದಿಲ್ಲ.
ಆದರೆ ಇದಕ್ಕೆ ಅಪವಾದ ವೆನ್ನುವಂತೆ ನೃಪತುಂಗನೇ ಈ ಅಲಂಕಾರ ಗ್ರಂಥವನ್ನು ಬರೆದ ಎನ್ನುವ ಮಾತುಗಳಿವೆ ಆದರೆ ಅದು ಎಷ್ಟು ಸತ್ಯವೋ ತಿಳಿಯುತ್ತಿಲ್ಲ. ನಾನಿಲ್ಲ ಶಾಸನಕ್ಕೆ ಪ್ರಾಧಾನ್ಯತೆ ಕೊ‌ಟ್ಟಿರುವುದರಿಂದ ಶ್ರೀವಿಜಯನೇ ಕವಿ ಎಂದು ಉಲ್ಲೇಖಿಸಿರುವೆ ಮತ್ತು ಕವಿರಾಜಮಾರ್ಗದಲ್ಲಿಯೂ ಕವಿಯ ಉಲ್ಲೇಖ ಇರುವುದು ಕಂಡುಬರುತ್ತದೆ.
ಪರಮ ಶ್ರೀವಿಜಯ ಕವೀ
ಶ್ವರ ಪಂಡಿತ ಚಂದ್ರ ಲೋಕಪಾಲಾದಿಗಳಾ
ನಿರತಿಶಯ ವಸ್ತು ವಿಸ್ತರ
ವಿರಚನೆ ಲಕ್ಷ್ಯಂ ತತಾದ್ಯ ಕಾವ್ಯಕ್ಕೆ ಎಂದುಂ[1-32]

ಮತ್ಯೇಭವಿಕ್ರೀಡಿತವೃತ್ತಂ|| ಸಕಳಾಳಾಪ ಕಳಾಕಳಾಪ ಕಥಿತ ವ್ಯಾವೃತ್ತಿಯೊಳ್ ಕೂಡಿ ಚಿ
ತ್ರಕರಂಬೋಲ್ ಪರಭಾಗ ಭಾವ ವಿಲಸದ್ವರ್ಣ ಕ್ರಮಾವೃತ್ತಿಯಂ
ಪ್ರಕಟಂ ಮಾಡಿರೆ ಪೇೞ್ದ ಚಿತ್ರಕೃತಿಯಿಂ ವ್ಯಾವರ್ಣಿಸುತ್ತುಂ ಕವಿ
ಪ್ರಕರಂ ಶ್ರೀವಿಜಯಪ್ರಭೂತಮನಿದಂ ಕೈಕೊಳ್ವದೀ ಮಾೞ್ಕೆಯಿಂ [1-150]

ಉತ್ಪಲಮಾಲಾವೃತ್ತಂ|| ಭಾವಿಸಿ ಶಬ್ದ ತತ್ತ್ವ ಸಮಯ ಸ್ಥಿತಿಯಂ ಕುಱಿತೊಂದು ಅಶೇಷ ಭಾಷಾ ವಿಷಯೋಕ್ತಿಯಂ ಬಗೆದು ನೋಡಿ ಪುರಾಣ ಕವಿ ಪ್ರಭು ಪ್ರಯೋಗಾ ವಿಳಸತ್ ಗುಣೋದಯಮನಾಯ್ದವಱಿಂ ಸಮೆದೊಂದು ಕಾವ್ಯದಿಂ ಶ್ರೀವಿಜಯ ಪ್ರಭೂತ ಮುದಮಂ ತನಗಾಗಿಸಿದೊಂ ಕವೀಶ್ವರಂ[2-155]
ಈ ರೀತಿಯಾಗಿ ಕವಿ ತನ್ನ ಹೆಸರನ್ನು ಅಲ್ಲಲ್ಲಿ ಹೇಳಿಕೊಂಡಿರುವುದು ಶ್ರೀವಿಜಯನೇ ಈ ಕಾವ್ಯದ ಕರ್ತೃ ಎಂದು ನಾವು ತಿಳಿಯಬಹುದಾಗಿದೆ.
ರಾಜ ನೃಪತುಂಗನ ಉಲ್ಲೇಖ ಇದೇ ಕವಿರಾಜಮಾರ್ಗದ
ಅದಱಿಂದ ಲಸದೆ ಪೀನಂ
ಪದೆಯದೆ ಪಾಂಗೞಿದು ದೋಷಮಂ ಪಿಂಗಿಸಿ
ಪ್ಪದೆ ಬಗೆದು ಪೇೞುವುದಾಗಮಂ
ಉದಾರ ನೃಪತುಂಗದೇವ ವಿದಿತಕ್ರಮದಿಂ[1-44] ಎನ್ನುವಲ್ಲಿ ದೊರಕುತ್ತದೆ.

ಅದು ಹೇಗೇ ಇರಲಿ ನಾನು ಶ್ರೀವಿಜಯ ಈ ಕೃತಿಯ ಕರ್ತೃ ಎಂದು ಭಾವಿಸಿದ್ದೇನೆ.   





Saturday 25 November 2017

ವಾತಾಪಿಪುರಿ ವಧೂವರತಾಮ್

ಬಾದಾಮಿ ಚಳುಕ್ಯರ ಮೊದಲ ದೊರೆ ಜಯಸಿಂಹ, ಜಯಸಿಂಹನ ಮಗ ರಣರಾಗ, ಅವನ ಮಗ ಒಂದನೇ ವಲ್ಲಭೇಶ್ವರ ಪೊಲೆಕೇಶಿ , ಅವನಿಗೆ ಮೂರು ಜನ ಮಕ್ಕಳು ಪೂಗವರ್ಮ, ಮೊದಲ ಕೀರ್ತಿವರ್ಮ, ಮತ್ತು ಮಂಗಲೇಶ. ಆದರೆ ಇಲ್ಲಿ ಪೂಗವರ್ಮ ನೆನ್ನುವ ದೊರೆ ಇದ್ದಿರುವ ಬಗ್ಗೆ ಸಂಶಯಗಳಿವೆ. ಇವರಲ್ಲಿ ಒಂದನೇ ಕೀರ್ತಿವರ್ಮನ ಮಗ ಎರಡನೇ ಪೊಲೆಕೇಶಿ, ಮತ್ತು ಕುಬ್ಜವಿಷ್ಣುವರ್ಧನ.
ಎರಡನೇ ಪೊಲೆಕೇಶಿ ಅತ್ಯಂತ ಪ್ರಸಿದ್ಧನಾಗಿದ್ದ.

ಬಾದಾಮಿ ಈ ಅರಸುಗಳ ಆಡಳಿತದ ಪ್ರಮುಖ ಕೇಂದ್ರವಾಗಿತ್ತು ಮತ್ತು ಇದು ರಾಜಧಾನಿಯಾಗಿತ್ತು, ಇದನ್ನು ವಾತಾಪಿ ಎಂದು ಕರೆಯಲಾಗುತ್ತಿತ್ತು. ಬಾದಾಮಿಯ ಚಾಳುಕ್ಯರ ಶಾಸನಗಳ ಪೈಕಿ ಬಾದಾಮಿಯಲ್ಲಿ ದೊರೆತ ಮೊದಲನೆಯ ಪುಲಕೇಶಿಯ ಶಾಸನ, ಕಾಲದ ದೃಷ್ಟಿಯಿಂದ ಮುಖ್ಯವಾದ್ದು. ಐದು ಸಾಲುಗಳುಳ್ಳ ಶಾಸನ ಶಕ ಕಾಲದ ಅತಿ ಪ್ರಾಚೀನ ಉಲ್ಲೇಖವನ್ನೊಳಗೊಂಡ ಶಾಸನಗಳಲ್ಲಿ ಎರಡನೆಯದು.
1 ಸ್ವಸ್ತಿ ಶಕವರ್ಷೇಷು ಚತುಃಶತೇಷು ಪಂಚಷಷ್ಠಿಯತೇಷು
2 ಸ್ವಮೇಧಾದಿಯಜ್ಞಾನಾಂ ಯಜ್ವಾ ಶ್ರೌತವಿಧಾನತಃ
3 ಹಿರಣ್ಯಗರ್ಭಸಮ್ಭೂತಶ್ಚಲಿಕ್ಯೋ ವಲ್ಲಭೇಶ್ವರಃ
4 ಧರಾಧರೇನ್ದ್ರ ವಾತಾಪಿಮಜೇಯಂ ಭೂತಯೇ ಭುವಃ
5 ಅಧಸ್ತಾದುಪರಿಷ್ಟೌಚ್ಚ ದುರ್ಗಮೇತದಚೀಕರತ್
ಎಂದಿರುವ ಶಾಸನದ ಕಾಲ ಶಕ 465ಕ್ಕೆ ಸಮನಾದ ಕ್ರಿ.. 543. ಪುಲಕೇಶಿ ರಾಜ್ಯವಾಳತೊಡಗಿದ್ದು ಕ್ರಿ..ಸು. 540ರಿಂದ ಎಂದು ಶಾಸನದಿಂದ ಗೊತ್ತಾಗುತ್ತದೆ. ಅಲ್ಲದೆ ಅಜೇಯವಾದ ವಾತಾಪಿಯ (ಬಾದಾಮಿ) ದುರ್ಗವನ್ನು ಕಟ್ಟಲು ಈತ ಕಾರಣನೆಂದೂ ತಿಳಿದುಬರುತ್ತದೆ. ಹೀಗೆ ಬಾದಾಮಿಯನ್ನು ವಾತಾಪಿ ಎಂದು ಕರೆದದ್ದು ತಿಳಿದು ಬರುತ್ತದೆ.
ಪೊಲೆಕೇಶಿ ಇಲ್ಲಿ ಪೊಲಿಕೇಶಿ ಎಂದು ಈ ಕೆಳಗಿನ ಸಾಲುಗಳಲ್ಲಿ ವಿವರಿಸಲಾಗಿದೆ.

ತಸ್ಯಾಭವತ್ತನೂಜಱ್ಪೊಲಿಕೇಶಿ ಯ ಶ್ರಿತೇನ್ದುಕಾನ್ತಿರಪಿ |

ಶ್ರೀವಲ್ಲಭೋಪ್ಯಯಾಸೀದ್ವಾತಾಪಿ ಪುರಿ ವಧೂವರತಾಮ್ ||  



ನಾಗತ್ತರನಿಗೆ - ಬೆಂಗಳೂರಿನ ಸಮೀಪದ ಬೇಗೂರಿನ ಪಟ್ಟ


ಬೆಂಗಳೂರಿನ ಸಮೀಪದ ಬೇಗೂರಿನ ಗಂಗ ಎರೆಯಪ್ಪನ ಶಾಸನ ಇದು. ಸುಮಾರು ೮೯೦ನೇ ಇಸವಿಯ ಶಾಸನ. ತನ್ನ ಹಗೆಗಳನ್ನೆಲ್ಲಾ ಸಂಹರಿಸಿ ವೈರಿಗಳ ಉಪಟಳವನ್ನು ನಿಲ್ಲಿಸಿ, ಲಕ್ಷ್ಮೀಯೇ ತಾನಾಗಿ ವರಿಸಿದ ಪತಿ, ತಾಳವೇ ಮೊದಲಾದ ಅಸಂಖ್ಯ ಗುಣಸಮೂಹಗಳೆಂಬ ಆಭರಣಗಳಿಂದ ಭೂಷಿತನಾದ, ಶ್ರೇಷ್ಟ ಪುರುಷ ಶ್ರೀಮತ್ ಎರೆಯಪ್ಪ ರಾಜರು ತನ್ನ ವೈರಿಗಳನ್ನೆಲ್ಲ ನಿರ್ಮೂಲ ಮಾಡಿ ಗಂಗವಾಡಿ ತೊಂಭತ್ತಾರು ಸಾವಿರವನ್ನು ಏಕಚ್ಛತ್ರದಡಿಯಲ್ಲಿ ಆಳುತ್ತ ಪ್ರಜಾಜನರನ್ನು ಸುಖದಿಂದ ಆಳುತ್ತಿದ್ದ ಅರಸು ಎರೆಯಪ್ಪ ಅರಸ. ತನ್ನ ಅಪ್ಪಣೆಯಂತೆ ವೀರ ಮಹೇಂದ್ರ ಎನ್ನುವವನು ತುಂಬೆಪಾದಿಯಲ್ಲಿ ಹೋರಾಡಿ ವೀರ ಮರಣವನ್ನು ಹೊಂದಿರುವುದನ್ನು ಕೇಳಿ ತಾನು ಮೆಚ್ಚಿ ನಾಗತ್ತರನಿಗೆ ಪಟ್ಟವನ್ನು ಕಟ್ಟಿ ಬೆಂಪೂರು ಹನ್ನೆರಡು ಎನ್ನುವ ಪ್ರದೇಶವನ್ನು ಶಾಸನಬದ್ಧವಾಗಿ ಕಲ್ನಾಡಾಗಿ ನೀಡಿದ ಎನ್ನಲಾಗಿದೆ. ಇರುಗನು ಹೋರಾಡಿ ಮಡಿದ ಉಲ್ಲೇಖವಿದ್ದು ಅವನು ಅಯ್ಯಪದೇವನ ಮಗನಿರಬಹುದು. ಎರೆಯಪ್ಪನು ಮೆಚ್ಚಿ ಇರುಗನಿಗೆ, ನಾಗತ್ತರ ಪಟ್ಟ ಕಟ್ಟಿ, ಬೆಂಪೂರು ಹನ್ನೆರಡನ್ನು ಅವು (ಹನ್ನೆರಡು)ಯಾವುವೆಂದರೆ ಬೆಂಪೂರು, ತೊವೆಗೂರು, ಹೂವಿನಪುಲ್ಲಿಮಂಗಳ, ಕೂತನಾಡು, ನಲ್ಲೂರು. ಕೊಮರಂಗಂದು ,ಇಗ್ಗಲೂರು, ದುಗ್ಮೊನೆಲ್ಮಲ್ಲಿ, ಗಳಂಜವಾಗಿಲೂ, ಸಾರಮು, ಎಳ್ಕುಂಟೆ, ಪರವೂರು ಮತ್ತು ಕೂಡಲು). ನಾಗತ್ತರನು ಬೇಗೂರು ಪ್ರಾಂತ್ಯದ ಅಧಿಕಾರಿಯಾಗಿದ್ದನು ಎನ್ನುವುದು ತಿಳಿಯುವುದು. ಆನೆಯೊಳಾಂತಿರುದು ಸಾಯುವ ವಿಷಯ ಬಂದಿರುವುದರಿಂದ ಆನೆಯ ಜೊತೆ ಕಾಳಗ ನಡೆದಿರುವುದು ತಿಳಿಯುವುದಲ್ಲದೇ, ಕಲ್ನಾಡು ಮುಂತಾದ ಪದ ಬಳಕೆ ಕಂಡು ಬರುತ್ತದೆ.
ಶಾಸನ ಪಾಠ :
1. ಸ್ವಸ್ತಿಸಮಸ್ತಭುವನವಿನೂತಗಙ್ಗಕುಳಗಗನನಿರ್ಮ್ಮಳತಾರಾಪತಿಜಳಧಿಜಳವಿಪುಳವಳಯಮೇಖಳ ಕಳಾಪಾಳಂ
2. ಕ್ರಿತ್ಯೈಳಾಧಿಪತ್ಯಲಕ್ಷ್ಮೀಶ್ವಯಂವೃತಪತಿತಾಳ್ವಾದ್ಯಗಣಿತಗುಣಗಣವಿಭೂಷಣವಿಭೂಷಿತವಿಭೂತಿ ಶ್ರೀಮದೆಱೆಯಪ್ಪ ರಸರ್
3. ಪಗೆವರೆಲ್ಲಮಂನಿಕ್ಷತ್ರಮ್ಮಾಡಿಗಙ್ಗವಾಡಿತೊಮ್ಭತ್ತಱುಸಾಸಿರಮುಮನೇಕಛತ್ರಚ್ಛಾಯೆಯೊಳಾಳುತ್ತಮೀೞ್ದು ಬೀರಮ
4. ಹೇನ್ದ್ರನೊಳ್ಕಾದಲೆನ್ದುಅಯ್ಯಪದೇವಂಗೆಸಾಮನ್ತಸಹಿತಂನಾಗತ್ತರನಂದಣ್ಡುವೇೞ್ದೊಡೆ ತುಮ್ಬೆಪಾದಿಯೊಳ್ಕಾದಿಕಾಳೆಗಮಿಮ್ಬ
5. ೞಿದೊಡೆಆನೆಯೊಳಾನ್ತಿಱಿದುಸತ್ತೊಡದಂಕೇಳ್ದೆಱೆಯಪಂಮೆಚ್ಚಿಇರುಗಂಗೆಗನಾಗತ್ತರವಟ್ಟಂಗಟ್ಟಿ ಬೆಂಪೂರ್ಪ್ಪನ್ನೆರಡು
6. ಮಂಸಾಸನಬದ್ಧಂಕಲ್ನಾಡಿತ್ತನವಾವುವೆನ್ದೊಡೆಬೆಂಪೂರುತೊವಗೂರುಪೂವಿನಪುಲ್ಲಿಮಙ್ಗಲಕೂತನಿಡು ನಲ್ಲೂರು
7. ನಲ್ಲೂರುಕೊಮ
8. ರಙ್ಗುನ್ದುಇ
9. ಗ್ಗಲೂರುದು
10. ಗ್ಮೊನೆಲ್ಮಲ್ಲಿ
11. ಗಳಂಜವಾ
12. ಗಿಲೂ
13. ಸಾಱಮು
14. ಎೞ್ಕುಣ್ಡೊಪರವೂರು
15. ಕೂಡಲೆಇನಿತುಮ
16. ಪೊಲಮೇರೆಸಹಿತ
17. ಮಿತ್ತನೆಱೆಯಪಂ
18. ಶವುಚರನ್ನಾಗರಂ
19. ಗೆಮಙ್ಗಳಮಹಾಶ್ರೀ