ಸುಮಾರು ಕ್ರಿ. ಶ ೭ ನೇ ಶತಮಾನದಿಂದ ನಮಗೆ ಕಾಣಿಸಿಕೊಳ್ಳುವ ಸಾಂತರ ವಂಶದ ರಾಜರು, ಶಿವಮೊಗ್ಗ ಮತ್ತು ಈಗಿನ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚು ಪ್ರಸಿದ್ಧರಾಗಿದ್ದರು. ಕಲೆ ವಾಸ್ತು ಶಿಲ್ಪ ಹಾಗೂ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ಕೊಟ್ಟವರು. ಅವರ ಕೊಡುಗೆಗಳಲ್ಲಿ ಶಿವಮೊಗ್ಗ ಜಿಲ್ಲೆಯ ಹೊಂಬುಜ ಅಥವ ಇಂದಿನ ಹುಂಚದಿಂದ ಬಂದ ಸಾಂತರ ಪ್ರಮುಖ ಆಕರ್ಷಣೀಯ ದೇಗುಲಗಳಲ್ಲಿ ಹೊಸಗುಂದ ಪ್ರಮುಖವಾದದ್ದು. ಸಾಗರ ತಾಲೂಕಿನಲ್ಲಿ ಪ್ರಕೃತಿಯ ಹಸಿರು ಸೊಬಗಿನಲ್ಲಿ ಕಲೆಯನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾ ಇರುವ ರಮಣೀಯ ಕ್ಷೇತ್ರಗಳಲ್ಲಿ ಒಂದು. ಶಿಲ್ಪ ಕಲೆಯ ಜೊತೆಗೆ ಅತೀ ಅಪರೂಪವಾದ ಮಿಥುನಶಿಲ್ಪವನ್ನು ಹೊಂದಿರುವ ದೇವಾಲಯಗಳಲ್ಲಿ ಹೊಸಗುಂದ ಪ್ರಮುಖವಾದದ್ದು. ಇತ್ತೀಚೆಗೆ ಇದು ನವೀಕರಣಗೊಂಡಿದ್ದರೂ ಪ್ರಾಚೀನತೆಯನ್ನು ಕಳೆದುಕೊಳ್ಳದೇ ಅರ್ವಾಚೀನ ಜಗತ್ತಿನಲ್ಲಿ ನಿಂತಿದೆ.
No comments:
Post a Comment