Search This Blog

Thursday 6 October 2016

ಕಾ ಚಿಂತಾ ಮರಣೇ.......................ರಣೇ

ಯುದ್ಧದಲ್ಲಿನ ಜಯದಿಂದ ಜಯಲಕ್ಷ್ಮಿ ಲಭಿಸಿ ಅಭಿಮಾನಿಗಳ ಪ್ರಜೆಗಳ ನಾಗರೀಕರ ಪ್ರಶಂಸೆಗೆ ಪಾತ್ರರಾಗುತ್ತಾರೆ. ವೀರಾವೇಶದಿಂದ ಹೋರಾಡಿ ವೀರ ಮರಣವನ್ನು ಹೊಂದಿದರೆ ಸ್ವರ್ಗಪ್ರಾಪಿಯಾಗುತ್ತದೆ. ಸ್ವರ್ಗದ ಜಯಾಂಗನೆ ಒಳಿಯುತ್ತಾಳೆ. ದೇಶಕ್ಕಾಗಿ ಪ್ರಾಣ ತೆತ್ತು ದೇಶಭಿಮಾನವನ್ನು ಹೆಚ್ಚಿಸಿದಂತಾಗುತ್ತದೆ. ಈ ನಶ್ವರವಾದ ಶರೀರಕ್ಕಾಗಿ (ಒಂದು ಕ್ಷಣದಲ್ಲಿ ಧ್ವಂಸವಾಗುವ) ಈ ದೇಹಕ್ಕಾಗಿ ರಣಾಂಗಣದಲ್ಲಿ ಮರುಕ ಪಡಬಾರದು ಆಶೆಯನ್ನು ಹೊಂದಿ ರಣಾಂಗಣದಿಂದ ಹೇಡಿಯಂತೆ ಹಿಂದಿರುಗ ಬಾರದೆನ್ನುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳಲ್ಲಿ ಶಾಸನಾಂತ್ಯದಲ್ಲಿ ಹಾಕಲಾಗುತ್ತಿತ್ತು. ಆ ಕಾಲಕ್ಕೆ ಸಾರ್ವಜನಿಕ ಸ್ಥಳ ಎನ್ನುವುದು ದೇವಾಲಯಗಳಾಗಿತ್ತು. ಕಲೆ, ಸಾಹಿತ್ಯ, ಆಚಾರ ವಿಚಾರಗಳ ಧಾಮವಾಗಿದ್ದ ದೇವಾಲಯಗಳಲ್ಲಿ ಶಾಸನ ಬರೆಸುವ ರೂಢಿ ಬಳಕೆಗೆ ಬಂದಿತ್ತು.
   

No comments:

Post a Comment