ಸುಮಾರು ೯ನೇ ಶತಮಾನದ ಆರಂಭದಲ್ಲಿ ನಮಗೆ ಕಾಣಸಿಗುವ ಶಾಸನಗಳಲ್ಲಿ ಕೀಳ್ಗುಂಟೆ ಅಥವಾ ಕೀಳ್ಗಂಚಿ ಪ್ರಮುಖವಾದದ್ದು. ಅತ್ಯಂತ ಕ್ರೂರವೂ ಅಸಹ್ಯವೂ ಆದ ಈ ಸಂಪ್ರದಾಯವನ್ನು ಅದು ಹೇಗೆ ಸತಿ ಸಹಗಮನ ಹೊಡೆದು ಹಾಕಿತೋ ತಿಳಿಯುತ್ತಿಲ್ಲ. ಸತಿ ಪದ್ಧತಿಯಲ್ಲಿ ತನ್ನ ಗಂಡನ ಚಿತೆಗೆ ಸತಿ ಹಾರಿ ಜೀವ ತೆಗೆದುಕೊಳ್ಳುತ್ತಾಳೆ. ಆದರೆ ಇಲ್ಲಿ ಯಾವುದೋ ಒಬ್ಬ ರಾಜ ಮರಣ ಹೊಡಿದಾಗ ಅತನ ಶವದ ಕೆಳಗೆ ಜೀವಂತ ವ್ಯಕ್ತಿಯೊಬ್ಬನನ್ನು ಮಲಗಿಸಿ ಅವನ ಆತ್ಮಾರ್ಪಣೆ ಮಾಡಿಸಲಾಗುತ್ತದೆ. ಈ ಅನಿಷ್ಟ ಪದ್ಧತಿಯ ಬಗ್ಗೆ ಒಂದು ಮಾತನ್ನೂ ಹೇಳಲಾಗುತ್ತಿಲ್ಲ.
Courtessy . E I
No comments:
Post a Comment