Search This Blog

Thursday 16 July 2020

ಕಾವ್ಯಾದರ್ಶದ ಚತುರ್ಮುಖ

ಚತುರ್ಮುಖ ಮುಖಾಂಭೋಜ ವನಹಂಸ ವಧೂರ್ಮಮ |
ಮಾನಸೇ ರಮತಾಂ ನಿತ್ಯಂ ಸರ್ವಶುಕ್ಲಾ ಸರಸ್ವತೀ ||

ಪ್ರವಾಹದಂತೆ ಹರಿಯುತ್ತಿರುವ ಸರಸ್ವತಿ ನಮಗೆ ಜ್ಞಾನದ ಪ್ರವಾಹವನ್ನು ಹರಿಸಲಿ, ನಮ್ಮ ಮನಸ್ಸನ್ನು ಜ್ಞಾನದ ಪ್ರವಾಹದಿಂದ ರಮಿಸಲಿ, ದೋಷರಹಿತವಾದ ಶಬ್ದಗಳು ವಾಕ್ಯಗಳು ನನಗೆ ಒದಗಿ ಬರಲಿ ಎನ್ನುವ ಆಶಯದೊಂದಿಗೆ ದಂಡಿ ಎನ್ನುವ ಕವಿ ಕಾವ್ಯಾದರ್ಶವನ್ನು ಆರಂಭಿಸುತ್ತಾನೆ.

ಕಲಚೂರಿಗಳ ದೊರೆ ತ್ರೈಲೋಕ್ಯಮಲ್ಲದೇವ ಮಧ್ಯಪ್ರದೇಶದ ರೇವಾ ತಾಮ್ರಪಟವನ್ನು ಸಾ ಶ. ೯೬೩ರಲ್ಲಿ ಬರೆಸುತ್ತಾನೆ. ಅಕ್ಷರವನ್ನು ತುಂಬಾ ಸುಂದರವಾಗಿ ಆಲಂಕಾರಿಅಕವಾಗಿ ಬರೆಯಲಾಗಿದೆ. ಅಕ್ಷರಸ್ಖಾಲಿತ್ಯ ಇದ್ದರೂ ತುಂಬಾ ಸುಂದರವಾಗಿದೆ. ಅನುಸ್ವಾರಾಕ್ಷರಗಲನ್ನು ಮತ್ತು ಮೇಲಿನ ಕೊಂಬುಗಳನ್ನು ವಿಶೇಷವಾಗಿ ಬರೆಯಲಾಗಿದೆ. ನಂದಿನಾಗರಿ ಅಕ್ಷರಗಳನ್ನು ಬಳಸಿಕೊಂಡಿದ್ದರೂ ನಾಗರಿಯೂ ನುಸುಳಿದಂತಿದೆ. ಈ ಶಾಸನದಲ್ಲಿ ದಂಡಿಯ ಕಾವ್ಯಾದರ್ಶದ ಮಂಗಲ ಶ್ಲೋಕವನ್ನು ನಾಲ್ಕು ಮತ್ತು ಐದನೇ ಸಾಲಿನಲ್ಲಿ ಬಳಸಿಕೊಂಡದ್ದು ಬಹಳ ವಿಶೇಷವಾಗಿ ಕಾಣುತ್ತದೆ.
ಸ್ವಲ್ಪ ಬುದ್ಧ್ಯಾ ಮಂದಮತಿರಹಂ ಯತ್ತುವಾಲ್ಯಾತಿ ಉದ್ಗೀರಿತಮ್ |
ಶುದ್ಧಮಶುದ್ಧಂ ವಾ ಪಂಡಿತ ವಿಶ್ವೇಶ್ವರೇಣ ಲಿಖಿತಮಿತಿ || ಎಂದು ಬರೆದು ಈ ಶಾಸನದಲ್ಲಿನ ತಪ್ಪುಗಳನ್ನು ಮನ್ನಿಸಿ ಎಂದು ಶಾಸನ ಕವಿ ವಿಶ್ವೇಶ್ವರನಿಂದ ರಚಿಸಲ್ಪಟ್ಟ ಈ ಶಾಸನವನ್ನು ಬರೆದವನು ಪಂ. ಗಂಗಾಧರ ಮತ್ತು ಶೀರುಕನೆನ್ನುವವನು.




No comments:

Post a Comment