Search This Blog

Thursday 16 July 2020

ದಿಕ್ಸುನ್ದರೀ ವದನವೆನ್ನುವ ತ್ರಿವಿಕ್ರಮಭಟ್ಟ

ರಾಷ್ಟ್ರಕೂಟ ಮೂರನೇ ಇಂದ್ರರಾಜನ ಕಾಲ, ಅಂದರೆ ಸುಮಾರು, ಸಾ. ಶಕವರ್ಷ ೮೩೩ರಲ್ಲಿ ಒಂದು ಶಾಸನ ಹಾಕಿಸುತ್ತಾನೆ. ಹಾಗೆ ನೋಡಿದರೆ ರಾಷ್ಟ್ರಕೂಟರ ಕಾಲದಲ್ಲಿ ಅನೇಕ ಕವಿಗಳು ನಮ್ಮ ಪ್ರದೇಶಗಳಲ್ಲಿ ಕಾಣ ಸಿಗುತ್ತಾರೆ. ಕನ್ನಡದ ರಾಜನೊಬ್ಬ ಮಧ್ಯಪ್ರದೇಶದ ಬಗುಮ್ರಾದಲ್ಲಿ ಬರೆಸಿದ ಈ ತಾಮ್ರಪಟ ಶಾಸನ ಉತ್ತರದ ನಾಗರೀ ಲಿಪಿಯನ್ನು ಹೋಲುತ್ತದೆ. ಈ ಶಾಸನವನ್ನು ರೂಪಕಾಲಂಕಾರವನ್ನೇ ಬಳಸಿ ಬರೆದ ಕವಿ ನಲಚಂಪೂ ರಚಿಸಿದ ತ್ರಿವಿಕ್ರಮಭಟ್ಟ. ತ್ರಿವಿಕ್ರಮ ಸಮೃದ್ದ ಶಬ್ದಭಂಡಾರ ಹಾಗೂ ವಿವಿಧ ಕ್ರಿಯಾಪದಗಳ ವಿವಿಧ ಬಳಕೆಯಲ್ಲಿ ಈ ಕವಿ ಸಿದ್ಧಹಸ್ತ.
ಉದಯಗಿರಿಗತಾಯಾಂ ಪ್ರಾಕ್ ಪ್ರಭಾ ಪಾಂಡುತಾಯಾಂ ಅನುಸರಥಿ ನಿಶೀಥೇ ಶೃಂಗಮಸ್ತಾಚಲಸ್ಯ |
ಜಯತಿ ಕಿಮಪಿ ತೇಜ: ಸಾಂಪ್ರತಂ ವ್ಯೋಮಮಧ್ಯೆ ಸಲಿಲಮಿವ ವಿಭಿನ್ನಂ ಜಾಹ್ನವಂ ಯಾಮುನಂ ಚ |ಎನ್ನುವ ಈ ಶ್ಲೋಕದಿಂದ  ತ್ರಿವಿಕ್ರಮನಿಗೆ ಯಮುನಾ ತ್ರಿವಿಕ್ರಮ ಎಂಬ ಹೆಸರು ಬಂದಂತೆ ತೋರುತ್ತದೆ.
ನಳಚಂಪೂವನ್ನು ತ್ರಿವಿಕ್ರಮನೇ “ದಮಯಂತೀ ಕಥಾ" ಎಂದೂ ಕರೆದಿದ್ದಾನೆ. ಈ ಕೃತಿಯ ಪ್ರತಿಯೊಂದು ಉಚ್ಛ್ವಾಸದ ಕೊನೆಯಲ್ಲೂ “ಹರಿಚರಣಸರೋಜ” ಎಂಬ ಪದ ಪ್ರಯೋಗವಿದೆ. ಕಿರಾತಾರ್ಜುನೀಯವನ್ನು “ಲಕ್ಷ್ಯಂಕ” ವೆಂದೂ ಮಾಘಕಾವ್ಯವನ್ನು ತ್ರ್ಯಂಕ” ವೆಂದೂ ಕರೆದಿರುವಂತೆಯೇ, ತ್ರಿವಿಕ್ರಮ ಈ ಕಥೆಯನ್ನು ಪರಿಚರಣಸರೋಜಾಂಕ" ಎಂದು ಕರೆದಿದ್ದಾನೆ. ತ್ರಿವಿಕ್ರಮಭಟ್ಟನಿಗೆ ನಳಚಂಪೂ ಶಾಶ್ವತವಾದ ಕೀರ್ತಿಯನ್ನು ತಂದುಕೊಟ್ಟಿದೆ.

ದಿಕ್ಸುನ್ದರೀ ವದನ ಚಾನ್ದನ ಪತ್ರ ಭಂಗ ಲೀಲಾಯಮಾನ ಘನ ವಿಸ್ತೃತ ಕಾನ್ತ ಕೀರ್ತ್ತೇ |
ಶ್ರೀರಾಷ್ಟ್ರಕೂಟಕುಲಶೈಲಮಲಂಕರಿಷ್ಣೋಸ್ತಸ್ಮಾದಭೂನ್ನಿರುಪಮೋ ನಿರವದ್ಯ ಶೈಲಃ ||



No comments:

Post a Comment