ರಾಷ್ಟ್ರಕೂಟ ಮೂರನೇ ಇಂದ್ರರಾಜನ ಕಾಲ, ಅಂದರೆ ಸುಮಾರು, ಸಾ. ಶಕವರ್ಷ ೮೩೩ರಲ್ಲಿ ಒಂದು ಶಾಸನ ಹಾಕಿಸುತ್ತಾನೆ. ಹಾಗೆ ನೋಡಿದರೆ ರಾಷ್ಟ್ರಕೂಟರ ಕಾಲದಲ್ಲಿ ಅನೇಕ ಕವಿಗಳು ನಮ್ಮ ಪ್ರದೇಶಗಳಲ್ಲಿ ಕಾಣ ಸಿಗುತ್ತಾರೆ. ಕನ್ನಡದ ರಾಜನೊಬ್ಬ ಮಧ್ಯಪ್ರದೇಶದ ಬಗುಮ್ರಾದಲ್ಲಿ ಬರೆಸಿದ ಈ ತಾಮ್ರಪಟ ಶಾಸನ ಉತ್ತರದ ನಾಗರೀ ಲಿಪಿಯನ್ನು ಹೋಲುತ್ತದೆ. ಈ ಶಾಸನವನ್ನು ರೂಪಕಾಲಂಕಾರವನ್ನೇ ಬಳಸಿ ಬರೆದ ಕವಿ ನಲಚಂಪೂ ರಚಿಸಿದ ತ್ರಿವಿಕ್ರಮಭಟ್ಟ. ತ್ರಿವಿಕ್ರಮ ಸಮೃದ್ದ ಶಬ್ದಭಂಡಾರ ಹಾಗೂ ವಿವಿಧ ಕ್ರಿಯಾಪದಗಳ ವಿವಿಧ ಬಳಕೆಯಲ್ಲಿ ಈ ಕವಿ ಸಿದ್ಧಹಸ್ತ.
ಉದಯಗಿರಿಗತಾಯಾಂ ಪ್ರಾಕ್ ಪ್ರಭಾ ಪಾಂಡುತಾಯಾಂ ಅನುಸರಥಿ ನಿಶೀಥೇ ಶೃಂಗಮಸ್ತಾಚಲಸ್ಯ |
ಜಯತಿ ಕಿಮಪಿ ತೇಜ: ಸಾಂಪ್ರತಂ ವ್ಯೋಮಮಧ್ಯೆ ಸಲಿಲಮಿವ ವಿಭಿನ್ನಂ ಜಾಹ್ನವಂ ಯಾಮುನಂ ಚ |ಎನ್ನುವ ಈ ಶ್ಲೋಕದಿಂದ ತ್ರಿವಿಕ್ರಮನಿಗೆ ಯಮುನಾ ತ್ರಿವಿಕ್ರಮ ಎಂಬ ಹೆಸರು ಬಂದಂತೆ ತೋರುತ್ತದೆ.
ನಳಚಂಪೂವನ್ನು ತ್ರಿವಿಕ್ರಮನೇ “ದಮಯಂತೀ ಕಥಾ" ಎಂದೂ ಕರೆದಿದ್ದಾನೆ. ಈ ಕೃತಿಯ ಪ್ರತಿಯೊಂದು ಉಚ್ಛ್ವಾಸದ ಕೊನೆಯಲ್ಲೂ “ಹರಿಚರಣಸರೋಜ” ಎಂಬ ಪದ ಪ್ರಯೋಗವಿದೆ. ಕಿರಾತಾರ್ಜುನೀಯವನ್ನು “ಲಕ್ಷ್ಯಂಕ” ವೆಂದೂ ಮಾಘಕಾವ್ಯವನ್ನು ತ್ರ್ಯಂಕ” ವೆಂದೂ ಕರೆದಿರುವಂತೆಯೇ, ತ್ರಿವಿಕ್ರಮ ಈ ಕಥೆಯನ್ನು ಪರಿಚರಣಸರೋಜಾಂಕ" ಎಂದು ಕರೆದಿದ್ದಾನೆ. ತ್ರಿವಿಕ್ರಮಭಟ್ಟನಿಗೆ ನಳಚಂಪೂ ಶಾಶ್ವತವಾದ ಕೀರ್ತಿಯನ್ನು ತಂದುಕೊಟ್ಟಿದೆ.
ದಿಕ್ಸುನ್ದರೀ ವದನ ಚಾನ್ದನ ಪತ್ರ ಭಂಗ ಲೀಲಾಯಮಾನ ಘನ ವಿಸ್ತೃತ ಕಾನ್ತ ಕೀರ್ತ್ತೇ |
ಶ್ರೀರಾಷ್ಟ್ರಕೂಟಕುಲಶೈಲಮಲಂಕರಿಷ್ಣೋಸ್ತಸ್ಮಾದಭೂನ್ನಿರುಪಮೋ ನಿರವದ್ಯ ಶೈಲಃ ||
ಉದಯಗಿರಿಗತಾಯಾಂ ಪ್ರಾಕ್ ಪ್ರಭಾ ಪಾಂಡುತಾಯಾಂ ಅನುಸರಥಿ ನಿಶೀಥೇ ಶೃಂಗಮಸ್ತಾಚಲಸ್ಯ |
ಜಯತಿ ಕಿಮಪಿ ತೇಜ: ಸಾಂಪ್ರತಂ ವ್ಯೋಮಮಧ್ಯೆ ಸಲಿಲಮಿವ ವಿಭಿನ್ನಂ ಜಾಹ್ನವಂ ಯಾಮುನಂ ಚ |ಎನ್ನುವ ಈ ಶ್ಲೋಕದಿಂದ ತ್ರಿವಿಕ್ರಮನಿಗೆ ಯಮುನಾ ತ್ರಿವಿಕ್ರಮ ಎಂಬ ಹೆಸರು ಬಂದಂತೆ ತೋರುತ್ತದೆ.
ನಳಚಂಪೂವನ್ನು ತ್ರಿವಿಕ್ರಮನೇ “ದಮಯಂತೀ ಕಥಾ" ಎಂದೂ ಕರೆದಿದ್ದಾನೆ. ಈ ಕೃತಿಯ ಪ್ರತಿಯೊಂದು ಉಚ್ಛ್ವಾಸದ ಕೊನೆಯಲ್ಲೂ “ಹರಿಚರಣಸರೋಜ” ಎಂಬ ಪದ ಪ್ರಯೋಗವಿದೆ. ಕಿರಾತಾರ್ಜುನೀಯವನ್ನು “ಲಕ್ಷ್ಯಂಕ” ವೆಂದೂ ಮಾಘಕಾವ್ಯವನ್ನು ತ್ರ್ಯಂಕ” ವೆಂದೂ ಕರೆದಿರುವಂತೆಯೇ, ತ್ರಿವಿಕ್ರಮ ಈ ಕಥೆಯನ್ನು ಪರಿಚರಣಸರೋಜಾಂಕ" ಎಂದು ಕರೆದಿದ್ದಾನೆ. ತ್ರಿವಿಕ್ರಮಭಟ್ಟನಿಗೆ ನಳಚಂಪೂ ಶಾಶ್ವತವಾದ ಕೀರ್ತಿಯನ್ನು ತಂದುಕೊಟ್ಟಿದೆ.
ದಿಕ್ಸುನ್ದರೀ ವದನ ಚಾನ್ದನ ಪತ್ರ ಭಂಗ ಲೀಲಾಯಮಾನ ಘನ ವಿಸ್ತೃತ ಕಾನ್ತ ಕೀರ್ತ್ತೇ |
ಶ್ರೀರಾಷ್ಟ್ರಕೂಟಕುಲಶೈಲಮಲಂಕರಿಷ್ಣೋಸ್ತಸ್ಮಾದಭೂನ್ನಿರುಪಮೋ ನಿರವದ್ಯ ಶೈಲಃ ||
No comments:
Post a Comment