ಅವಿಭಜಿತ
ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಆರಂಭಕಾಲದ ಕನ್ನಡ - ಮತ್ತು ಸಂಸ್ಕೃತ ಮಿಶ್ರಿತ ಕನ್ನಡದ
ಶಾಸನಗಳು ಸಿಕ್ಕಿರುವುದೇ ಅಪರೂಪ ಪುತ್ತೂರಿನ ಭಂತ್ರ, ಮತ್ತು ಉದ್ಯಾವರದ
ಶಾಸನಗಳು , ಉಡುಪಿ ಜಿಲ್ಲೆಯ ವಡ್ಡರ್ಸೆ ಮತ್ತು ಕೋಟ ಹಿರೇ ಮಹಾಲಿಂಗೇಶ್ವರ, ಹಟ್ಟಿ ಅಂಗಡಿಯ
ಲೋಕನಾಥೇಶ್ವರ ದ ಶಾಸನಗಳನ್ನು ಬಿಟ್ಟರೆ ಉಳಿದವು ಹತ್ತನೇ ಶತಮಾನದ ತರುವಾಯ ಬಂದವುಗಳು. ಆದರೆ
ಉತ್ತರ ಕನ್ನಡದಲ್ಲಿ ಬಹಳಷ್ಟು ಶಾಸನಗಳು ಪ್ರಾಯಶ: ಶರಾವತಿಯಲ್ಲಿ ಮುಳುಗಿರುವ ಸಾಧ್ಯತೆಗಳನ್ನು
ಅಲ್ಲಗಳೆಯುವಂತಿಲ್ಲ. ಅವಿಭಜಿತ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಕರಾವಳಿಯುದ್ದಕ್ಕೂ ಹರಡಿರುವ ಹವ್ಯಕ ಬ್ರಾಹ್ಮಣರಿಗೆ
ನಂಟು ಹೊಂದಿರುವ ಹೈಗುಂದದಲ್ಲೇ ಅನೇಕ ಶಾಸನಗಳು ಇಂದು ಕಣ್ಮರೆಯಾಗಿವೆ. ಒಂದು ಕಾಲಕ್ಕೆ ಹೈಗುಂದ
ಅತ್ಯಂತ ಪ್ರಭಾವಿ ಮತ್ತು ಅತ್ಯಂತ ಪ್ರಮುಖ ಕೇಂದ್ರವಾಗಿತ್ತು ಆದರೆ ಆಮೇಲೆ ನಡುಗಡ್ಡೆಯ
ದ್ವೀಪವಾಗಿ ಆಧುನಿಕತೆಯಿಂದ ದೂರ ಉಳಿಯಿತು. ಆದರೆ ಕದಂಬರ ಕಾಲಕ್ಕೆ ಅದೊಂದು ಅಗ್ರಹಾರವಾಗಿತ್ತು.
ಪಲ್ಲವರ ಪ್ರಧಾನ ಮಂತ್ರಿಯಾದ ಚಂಡಮಹಾಸೇನನ ಮಗನು ಗೋಪಾಲದೇವನು ಹೈಗುಂದದ ಒಡೆಯನಾಗಿದ್ದನು
ಅನ್ನುತ್ತದೆ ಹಳದೀಪುರದ ಶಾಸನ. ಇದರಲ್ಲಿ ಅನೇಕ ಊರುಗಳ ಉಲ್ಲೇಖಗಳಿವೆ ಹಾಗೆಯ್ತೇ ಕಳನಿಯನ್ನೂ
ಮನೆದಾಣವನ್ನೂ ದಾನವಾಗಿ ಕೊಟ್ಟ ಉಲ್ಲೇಖವಿದೆ.
very informative
ReplyDelete