Search This Blog

Wednesday 31 August 2016

ಸ್ವಹಸ್ತೋಯಂ - ಭೋಜರಾಜಃ

ಆರಂಭ ಕಾಲೀನ ಸಹಸ್ರಮಾನದಲ್ಲಿ ಅಂದರೆ ಹತ್ತನೆ ಶತಮಾನಕ್ಕೂ ಮೊದಲು ಕಾಳಿದಾಸನಿಗೆ ಅನೇಕ ಅಭಿಮಾನಿ ಕವಿಗಳಿದ್ದದ್ದು ಅಲ್ಲಲ್ಲಿ ಕಂಡು ಬರುತ್ತವೆ. ಅನೇಕ ಶಿಲ್ಪಿಗಳು, ಅನೇಕ ಕಲಾಕಾರರು ಮತ್ತು ಕವಿಗಳು ಕಾಳಿದಾಸನನ್ನು ಒಂದಲ್ಲ ಒಂದು ರೀತಿಉಯಿಂದ ಹೊಗಳಿದ್ದಾರೆ ಮತ್ತು ಅಭಿಮಾನದಿಂದ ತಮ್ಮನ್ನೂ ಸಹ ಕಾಳಿದಾಸ ಎಂದೇ ಹೆಸರಿಸಿಕೊಂಡಿದ್ದಾರೆ. ಇನ್ನು ಕೆಲವರು ತಾವು ಕಾಳಿದಾಸನಿಗೆ ಸಮನಾದ ಕವಿಗಳು ಎಂದಿದ್ದರೆ ಮತ್ತೆ ಕೆಲವರು ಕಾಳಿದಾಸಕಿಂತಲೂ ತಾವು ಕಡಿಮೆಯವರಲ್ಲ ಅವನಿಗಿಂತ ಶ್ರೇಷ್ಠರು ಎಂದವರೂ ಇದ್ದಾರೆ. ಅನೇಕ ರಾಜರುಗಳು ತಮ್ಮ ಶಾಸನಗಳಲ್ಲಿ ರಘುವಂಶದ ಮಂಗಲಾಚರಣೆಯನ್ನು ತಾವು ಅಳವಡಿಸಿಕೊಂಡದ್ದು ಕಂಡು ಬರುತ್ತದೆ. ಹೀಗೆ ಕಾಳಿದಾಸ ಒಂದಿಲ್ಲೊಂದು ಕಾರಣಕ್ಕೆ ಆಗಾಗ ಜನಮಾನಸದಲ್ಲಿದ್ದ. ಸಾಮಾನ್ಯ್ ೮ನೇ ಶ್ಡತಮಾನದ ನಂತರದ ಅನೇಕ ಶಾಸನ ಸಾಹಿತ್ಯದಲ್ಲಿ ಹರ್ಷ ಚರಿತದ ಸಾಲುಗಳು ಬಂದಿದ್ದರೂ ಸಹ ಕವಿ ಗೌಣವಾಗಿಯೇ ಉಳಿದ. ಕಾಳಿದಾಸನ ಕಾಲಕ್ಕೆ ಮತ್ತು ಅವನ ನಂತರದ ಸಂಸ್ಕೃತ ಸಾಹಿತ್ಯ ಒಂದು ರೀತಿಯಲ್ಲಿ ಶ್ರೀಮಂತಗೊಳ್ಳುತ್ತಾ ಹೋಯಿತು. ಪಾಣಿನೀ ಮಹರ್ಷಿಯ ಶಿಕ್ಷಾ ದಲ್ಲಿನ ವಿಧಿಗಳನ್ನು ಅಳವಡಿಸಿಕೊಂಡು ಸುಸಂಬದ್ಧವಾಗುತ್ತಾ ಸಾಗಿತು ಅನ್ನ ಬಹುದು . ಸುಂದರ ಪದರಚನೆ ಆಲಂಕಾರಿಕ ಲಕ್ಷಣಗಳನ್ನು ಹೊತ್ತು ತಂದಿತು ಅಂದರೆ ತಪ್ಪಾಗುವುದಿಲ್ಲ. ಆದರೆ ಹತ್ತನೇ ಶತಮಾನದ ತರುವಾಯ ಬಂದ ಭೋಜ ಸ್ವತಃ ಸಂಸ್ಕೃತದ ಪ್ರಕಾಂಡ ಪಂಡಿತನಾಗಿದ್ದ ಆತನ ಆಸ್ಥಾನದಲ್ಲಿಯೂ ಪರಿಣತ ಮತ್ತು ಅತ್ಯಂತ ಶ್ರೇಷ್ಠ ಕವಿಗಳಿದ್ದರು. ಆತನ ಶಾಸನಗಳನ್ನು ಗಮನಿಸುತ್ತಾ ಸಾಗಿದರೆ ವಿದ್ವಜ್ಜನ ಸಮೂಹವೇ ಇದ್ದಿರ ಬಹುದು. ಪದಗಳ ರಚನೆ, ಪದಲಾಲಿತ್ಯ, ಮತ್ತು ಶಾಸನಗಳಲ್ಲಿ ಬಳಕೆಗೊಂಡ ಶ್ಲೋಕಗಳಂತೂ ಅದೊಂದು ಅತ್ಯದ್ಭುತ ಆಸ್ಥಾನವಾಗಿರಲೇ ಬೇಕು ಅನ್ನಿಸುತ್ತದೆ. ಬಹುಭಾಷಾ ಪಾಂಡಿತ್ಯ ಹೊಂದಿದ ಭೋಜ ಎಲ್ಲಿಯೂ ಕಾಳಿದಾಸನನ್ನು ಉಲ್ಲೇಖಿಸಿದ್ದು ಕಾಣಸಿಗುವುದಿಲ್ಲ. ಆದರೂ ಇಲ್ಲಿ ಉಜ್ಜಯಿನಿಯ ಶಾಸನದಲ್ಲಿ ತನ್ನ ಹಸ್ತಗಳಿಂದಲೇ ರಚಿಸಿದ ಶಾಸನವಿದು ಎಂದು ಎರಡೆರಡು ಬಾರಿ ಪ್ರಕಟಿಸಿದ್ದಾನೆ. ಆದರೆ ನಾವು ಈಗ ಕಲ್ಪಿಸಿಕೊಳ್ಳುವ ಕಾಳಿದಾಸನೇ ಬೇರೆ ಹಿಂದೆ ಆಗಿ ಹೋಗಿದ್ದ ಕಾಳಿದಾಸನೇ ಬೇರೆ. ಅದು ಹೇಗೋ ಇಂದು ಕಲ್ಪಿತ ಘಟನೆಗಳನ್ನು ಆಧರಿಸಿದ ಕಾಳಿದಾಸ ಕಾಣ ಸಿಗುತ್ತಾನೆ.

No comments:

Post a Comment