Search This Blog

Monday 29 August 2016

ಪಾರಿಜಾತ ಮಂಜರೀ - ಭೋಜನ ಪ್ರಹಸನ

ಅರ್ಜುನವರ್ಮನ ಈ ಶಾಸನವು ಮಧ್ಯ ಭಾರತದ ಧಾರಾನಗರದ್ದು ಇದನ್ನು ಹಿಂದೆ ಮಾಳವದ ಪರಮಾರ ರಾಜರು ಆಳುತ್ತಿದ್ದರು. ಪ್ರಾಚೀನ ನಾಗರೀ ಲಿಪಿಯಲ್ಲಿ ಈ ಶಾಸನವನ್ನು ಖಂಡರಿಸಿದ್ದರೂ ಅತ್ಯಂತ ಸುಂದರವಾದ ಅಕ್ಷರಗಳಿಂದ ಕೆತ್ತಲ್ಪಟ್ಟಿದೆ. ಈ ಭೋಜದೇವನ ಕುರಿತಾದ ಈ ಶಾಸನದಲ್ಲಿ ಭೋಜ ತಾನೇ ಶ್ರೀ ಕೃಷ್ಣ ಎನ್ನುವುದಾಗಿ ಹೋಲಿಸಿ ಕೊಂಡಿದ್ದಾನೆ. ಇದೊಂದು ಎರಡು ಅಂಕಗಳಿರುವ ಪ್ರಹಸನ ಇದರಲ್ಲಿ. ಈ ಪ್ರಹಸನದ ಕೊನೆಯ ಹಂತದಲ್ಲಿ ತಿಳಿದು ಬರುವುದು ಕಲಚೂರಿ ವಂಶದ ರಾಜಾ ಗಾಂಗೇಯನನ್ನು ಭೋಜನು ಸೋಲಿಸಿದ ವರ್ಣನೆ ಇದೆ. ಇದರಲ್ಲಿ ಸೂತ್ರಧಾರ, ನಟೀ, ಅರ್ಜುನವರ್ಮ, ವಿದಗ್ಧ, ರಾಣೀ ಸರ್ವಕಲಾ ಮತ್ತು ಅವಳ ಸೇವಕಿ ಕನಕಲೇಖಾ, ಹಾಗೂ ಕುಸುಮಾಕರ ಮತ್ತು ವಸಂತಲೀಲಾ. ಇದರ ನಾಯಕಿ ಪಾರಿಜಾತಮಂಜರಿ ಅಥವಾ ವಿಜಯ ಶ್ರೀ. ಕುಸುಮಾಕರನು ಸಂಸ್ಕೃತದಲ್ಲಿ ಮಾತನಾಡುತ್ತಾನೆ, ಉಳಿದವರು ಪ್ರಾಕೃತ ಮತ್ತು ಸೌರಸೇನಿಯಲ್ಲಿ ಮಾತನಾಡುತ್ತಾರೆ. ಈ ಶಾಸನದ ಆರಂಭದಲ್ಲಿ ಮಂಗಲಾಚರಣೆಯ ಶ್ಲೋಕ ಬಳಸದೇ ಈ ಶಾಸನಕ್ಕೆ ಎರಡು ಬಂಡೆಗಳನ್ನು ಆಯ್ದು ಕೊಂಡಿದ್ದೇನೆ ಎಂದು ಶಿಲ್ಪಿ ರಾಮದೇವನು ಹೇಳಿಕೊಳ್ಳುತ್ತಾನೆ . ಎಲ್ಲಾ ಶಾಸನಗಳ ಕ್ರಮದಂತೆ ತನ್ನ ಹೆಸರನ್ನು ಕೊನೆಗೆ ಬರೆದರೂ. ಓದುಗರು ತಿಳಿದಿರಲಿ ಎಂದು ಎರಡು ಶಾಸನ ಎಂದು ಬರೆದು ತನ್ನ ಜಾಣ್ಮೆ ಮೆರೆದಿದ್ದಾನೆ. ಈತನ ಅಕ್ಷರವಂತೂ ಇಂದಿನ ಮುದ್ರಿತ ದಾಖಲೆಗಳಿಗೆ ಕಡಿಮೆ ಇಲ್ಲ.

No comments:

Post a Comment