Search This Blog

Tuesday 23 August 2016

ಶಾಸನವೆಂದರೆ ಘಟಿತ ಘಟನೆಗಳ ದಾಖಲೆಗಳು ಮಾತ್ರವಲ್ಲ



ಶಾಸನಗಳು ಅಂದರೆ ಸಾಮಾನ್ಯವಾಗಿ ಎಲ್ಲರೂ ಭಾವಿಸುವುದು ಆಗಿಹೋದ ಘಟಿತ ಘಟನೆಗಳ ದಾಖಲೀಕರಣ ಎಂದೇ ಭಾವಿಸುತ್ತಾರೆ. ಇದರ ಬರಹಗಳು ಕೇವಲ ರಾಜವಂಶ ಮತ್ತು ಬಿರುದು. ಹಾಗೂ ದಾನ ದತ್ತಿ ಉಂಬಳಿ ಮತ್ತು ಕೆಲವು ವೀರರ ಕುರಿತಾದ ವಿಷಯಗಳು ಎಂದೇ ಭಾವಿಸಿರುತ್ತಾರೆ. ಆದರೆ ಅದಕ್ಕೂ ಮಿಗಿಲಾದ ಮತ್ತು ಅದ್ಭುತವಾದ ಅಂಶಗಳನ್ನೂ ಅನೇಕ ಶಾಸನಗಳು ಹೊಂದಿರುತ್ತವೆ ಅನ್ನುವುದು ಇಂತಹ ಶಾಸನಗಳಿಂದ ನಮಗೆ ಮಾಹಿತಿ ಸಿಗುತ್ತವೆ. ೬ನೇ ಶತಮಾನದಲ್ಲಿದ್ದ ಭಾರವಿಯ ಕಿರಾತಾರ್ಜುನೀಯ ಕೃತಿಯ ಹದಿನೈದನೆಯ ಸರ್ಗಕ್ಕೆ ಟೀಕೆಯನ್ನು ದುರ್ವೀತನು ಬರೆದ ಎನ್ನುವುದಾಗಿ ಉಲ್ಲೇಖಿಸಲಾಗಿದೆ. ದುರ್ವಿನೀತನು ಉದ್ಧಾಮ ಪಂಡಿತನಾಗಿದ್ದ ಅನ್ನುವುದು ಇದರಿಂದ ತಿಳಿದು ಬರುತ್ತದೆ. ಕನ್ನಡ ಲಿಪಿ ಮತ್ತು ಸಂಸ್ಕೃತ - ಮತ್ತು ಕನ್ನಡ ಭಾಷೆಯಲ್ಲಿರುವ ಶಾಸನವಿದು. ಗಂಗದೊರೆ ಮಾರಸಿಂಹನ ದತ್ತಿಯ ಕುರಿತಾದ ಶಾಸನ. ಕೋಲಾರ ಜಿಲ್ಲೆಯ ಶಿಡ್ಲಘಟ್ಟದ ಹೊಸಪೇಟೆಯಲ್ಲಿರುವ ಗಂಗರ ಕಾಲದ ಕ್ರಿ. ಶ ೮ನೇ ಶತಮಾನದ ಆರಂಭ ಕಾಲದ ಶಾಸನ.

1 comment:

  1. ಇಂತಹ ಹಲವಾರು ಪ್ರಮುಖ ಮಾಹಿತಿಗಳು ಕಾಲಘಟ್ಟದಲ್ಲಿ ಕಳೆದೇ ಹೋಗಿವೆ.
    ಇಂದು ಯಾರಿಗೂ ಆಸಕ್ತಿಯೂ ಇಲ್ಲ ಎಂಬುದು ದೌರ್ಭಾಗ್ಯ ಸರ್

    ReplyDelete