Search This Blog

Thursday 25 August 2016

ಆತ್ಮ ವಿಶ್ವಾಸದ ಅಜ್ಞಾತ ಕವಿಗಳು ಶಾಸನ ಸಾಹಿತ್ಯದಲ್ಲಿ

ಸಂಸ್ಕೃತ ಸಾಹಿತ್ಯದ ಮೇರು ಕವಿಗಳಲ್ಲಿ ಕಾಳಿದಾಸನಷ್ಟು ದೃಢತೆ ಮತ್ತು ಆತ್ಮ ವಿಶ್ವಾಸವಿದ್ದ ಕವಿ ಇನ್ನೊಬ್ಬನಿರಲಿಲ್ಲ. ತಾನು ರಚಿಸಿದ ಕಾವ್ಯಗಳಲ್ಲಿ ಅಥವಾ ಇನ್ನಾವುದೇ ಕೃತಿಗಳಲ್ಲಾದರೂ ಆತ ಆತ್ಮ ವಿಶ್ವಾಸವನ್ನು ತುಂಬಿದ್ದ. ಇದಕ್ಕೆ ಬಹಳಷ್ಟು ಉದಾಹರಣೆಗಳು ಸಿಗುತ್ತಾ ಹೋಗುತ್ತವೆ. ಮೇಘದೂತ ಮತ್ತು ಋತು ಸಂಹಾರವಂತೂ ಸ್ಪಷ್ಟ ನಿದರ್ಶನವನ್ನು ಕಟ್ಟಿಕೊಡುತ್ತವೆ. ಆದರೆ ಅದೇ ಕಾಲಕ್ಕೆ ಅಥವಾ ಆಮೇಲಿನ ಅನೇಕ ಕವಿಗಳಿಗೆ ಸ್ವಪ್ರತಿಷ್ಟೆ ಇರುವುದು ಕಾಣಬರುತ್ತವೆ. ಅದೇನೇ ಇರಲಿ ಕಾಳಿದಾಸನ ಬಗ್ಗೆ ಶಾಸನ ಸಾಹಿತ್ಯಗಳಲ್ಲಿ ಅತ್ಯಲ್ಪವೇ ಮಾಹಿತಿ ಸಿಗುತ್ತವೆ. ಆದರೆ ಕಾಳಿದಾಸನ ಆತ್ಮ ವಿಶ್ವಾಸವನ್ನು ತನ್ನಲ್ಲೂ ಕಂಡುಕೊಂಡವನು ಎರಡನೇ ಪೊಲೆಕೇಶಿಯ ಐಹೊಳೆಯ ಮೇಗುಟಿಯ ಜೈನ ದೇವಾಲಯದಲ್ಲಿ ಶಾಸನ ಬರೆದ ಕವಿ ರವಿಕೀರ್ತಿ. ಈತ ಕ್ರಿ ಶ ೬೩೭ ರಲ್ಲಿ ಕನ್ನಡ ಲಿಪಿಯಲ್ಲಿ ಸಂಸ್ಕೃತ ಶಾಸನ ರಚಿಸಿದ. ಭಾರವಿ ಮತ್ತು ಕಾಳಿದಾಸನಷ್ಟೇ ನಾನು ಕೂಡ ಸಮರ್ಥ ಎನ್ನುವುದು ಇವನ ವಿಶ್ವಾಸದ ನುಡಿಯಾಗಿತ್ತು. ಈತ ಬೇರಾವ ಕೃತಿ ರಚಿಸಿದ ಮಾಹಿತಿ ಸಿಗುತ್ತಿಲ್ಲ. ಆದರೆ ಕೂಡ ಬೇರೆ ಕೃತಿಯನ್ನು ರಚಿಸಿರಬಹುದು.  
ಬಾದಾಮಿ ಚಾಲುಕ್ಯರ ಕಾಲದಲ್ಲಿ ಸಿಗುವ ಸಂಸ್ಕೃತ ಕವಿಗಳಲ್ಲಿ ಇನ್ನೊಬ್ಬ ಅಜ್ಞಾತ ಕವಿ ಶಿವ ಭಟ್ಟಾರಕ ಕವಿ ಈತನು ಹರಪಾರ್ವತೀಯ ನಾಟಕವನ್ನು ಬರೆದು ಅದನ್ನು ಪ್ರದರ್ಶಿಸಿದ ಉಲ್ಲೇಖ ಧಾರಾಶ್ರಯ ಜಯಸಿಂಹನ ಮಹಾರಾಷ್ಟ್ರದ ನಾಸಿಕ್ ತಾಮ್ರಪಟದಿಂದ ತಿಳಿದು ಬರುತ್ತದೆ ಕ್ರಿ ಶ ಸುಮಾರಿ ೬೪೮ರಲ್ಲಿ ಇದ್ದ ಕವಿಯಾಗಿದ್ದ. ಈತನ ಈ ಕೃತಿ ಲಭ್ಯವಿರದಿದ್ದರೂ ಇವನು ಆ ಕಾಲದ ಆ ಪ್ರದೇಶದ ಪ್ರಮುಖ ಕವಿಯಾಗಿದ್ದ.


No comments:

Post a Comment