Search This Blog

Friday 20 October 2017

ಯಮ್ಮಿತ್ರಮೇವಾಶು ವವ್ರಿರೇ - ಮಯೂರ - 4


ಸ್ವಪ್ರತಿಜ್ಞಾ ಪಾರಣೋತ್ಥಾನ ನಾಗಿ ತನ್ನ ಬಲವಾದ ಸೈನ್ಯದೊಂದಿಗೆ ಶ್ಯೇನದಂತಹ ವ್ಯೂಹವನ್ನು ರಚಿಸಿಕೊಂಡು ವಿಷಮದೇಶವನ್ನು ಹೊಕ್ಕು ಯುದ್ಧೋತ್ಸಾಹನಾದಾಗ ಅದೇ ಸಮಯಕ್ಕೆ ಉತ್ತರದಲ್ಲಿದ್ದ ಗುಪ್ತರ ಸಾಮ್ರಾಜ್ಯದ ಚಕ್ರವರ್ತಿ ಎನಿಸಿದ ಸಮುದ್ರ ಗುಪ್ತನ ದಕ್ಷಿಣಾಪಥದ ದಂಡಯಾತ್ರೆ ಆರಂಭವಾಗುತ್ತದೆ. ಆಗ ಸಮುದ್ರಗುಪ್ತ ಪಲ್ಲವರ ರಾಜ ವಿಷ್ಣುಗೋಪನನ್ನು ಸೋಲಿಸಿ ಮಯೂರವರ್ಮನಿಗೆ ಬೆಂಬಲವಾಗಿ ನಿಂತು ಬಿಡುತ್ತಾನೆ ಇದೇ ಸಮಯವನ್ನು ಕಾಯುತ್ತಿದ್ದ ಮಯೂರ ಈ ಸಮಯದಲ್ಲಿ ಪ್ರಬಲನಾಗಿ ಬೆಳೆದಾಗಿತ್ತು. ಇದೇ ಸಮಯವನ್ನು ಉಪಯೋಗಿಸಿಕೊಂಡು ಕರ್ನಾಟಕದ ಪ್ರದೇಶದ ಮೈಸೂರು ಪ್ರಾಂತ್ಯ, ಬಾದಾಮಿ, ಶಿವಮೊಗ್ಗ ಮತ್ತು ಕುಂತಳ, ಕರಾವಳಿಯ ಭೂ ಬಾಗಗಳನ್ನು ಸೇರಿಸಿಕೊಂಡು ಬನವಾಸಿಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಕದಂಬ ವಂಶವನ್ನು ಸ್ಥಾಪಿಸುತ್ತಾನೆ. ಮುಂದೆ ಮೌರ್ಯರ ಕಾಲದಲ್ಲಿಯೂ ಅದು ಕುಂತಳ ನಗರವೆಂದೇ ಪ್ರಸಿದ್ಧಿಯನ್ನು ಪಡೆದಿತ್ತು.
ಪಲ್ಲವೇಂದ್ರಾ ಯಸ್ಯ ಶಕ್ತಿಮಿಮಾಂ ಲಬ್ದ್ವಾ ಪ್ರತಾಪಾನ್ವಯಾವಪಿ |
ನಾಸ್ಯ ಹಾನಿ ಶ್ರೇಯಸೀತ್ಯುಕ್ತಾ ಯಮ್ಮಿತ್ರಮೇವಾಶು ವವ್ರಿರೇ || 19 ||
ಹೌದು ಪಲ್ಲವ ರಾಜ ಈತನ ಸೈನ್ಯದ ಬಲವನ್ನು ನೋಡಿಯೇ ಮಯೂರನಲ್ಲಿ ಯುದ್ಧಮಾಡುವುದಕ್ಕಿಂತ ಮತ್ತು ನಾವು ಹಾನಿ ಮಾಡಿಸಿಕೊಳ್ಳುವುದಕ್ಕಿಂತ ಮಿತ್ರತ್ವಕ್ಕೆ ಹೆಚ್ಚು ಒತ್ತು ಕೊಟ್ಟರೆ ಅದು ನಮಗೇ ಶ್ರೇಯಸ್ಸು ಎಂದು ಬಗೆಯುತ್ತಾನೆ.
ಸಂಶ್ರಿತಸ್ತದಾ ಮಹೀಪಾಲಾನಾರಾಧ್ಯ ಯುದ್ಧೇಷು ವಿಕ್ರಮೈಃ |
ಪ್ರಾಪ ಪಟ್ಟಬಂಧ ಸಂಪೂಜಾಂ ಕರಪಲ್ಲವೈರ್ಪಪಲ್ಲವೈದ್ಧರ್øತಾಮ್ || 20 ||
ಭಂಗುರೋರ್ಮಿ ವಲ್ಗಿತೈರ್ನೃತ್ಯದಪರಾರ್ಣವಾಂಭಷ್ಕøತಾವಧಿಂ |
ಪ್ರೇಹರಾಂತಾಮನನ್ಯ ಸಂಚರಣ ಸಮಯಸ್ಥಿತಾಂ ಭೂಮಿಮೇವ ಚ || 21 ||
ಹೀಗೇ ಪಲ್ಲವರನ್ನೂ ಯುದ್ಧದಲ್ಲಿ ಸೋಲಿಸಿ ತನ್ನ ಸ್ವಪ್ರತಿಜ್ಞೆಯನ್ನು ನೆರವೇರಿಸಿದ್ದಲ್ಲದೇ ಕನ್ನಡದ ನಾಡಿಗೆ ಒಂದು ಒಳ್ಳೆಯ ವಂಶವನ್ನು ಕೊಟ್ಟ ಹೆಗ್ಗಳಿಕೆ ಮಯೂರನಿಗೆ ಸಲ್ಲುತ್ತದೆ. ಸಾತವಾಹನರು, ಸಾತಕರ್ಣಿಗಳ ಕಾಲದಲ್ಲಿ ಮತ್ತು ಪಲ್ಲವರ ಕಾಲದಲ್ಲಿ ಬನವಾಸಿಯು ಕುಂತಳನಗರ ಎಂದು ಪ್ರಸಿದ್ಧಿ ಪಡೆದಿದೆ.
ಕೃತಯುಗದಲ್ಲಿ ಕೌಮುದೀಯಾಗಿದ್ದ ಬನವಾಸಿ, ತ್ರೇತೆಯಲ್ಲಿ ಚೈದಲೀಪುರವಾಯಿತು. ಜಯಂತೀಪುರವೆಂದು ದ್ವಾಪರದಲ್ಲಿ ಕರೆಯಲ್ಪಟ್ಟ ಬನವಾಸಿ ಕಲಿಯುಗದಲ್ಲಿ ವೈಜಯಂತಿಯಾಗಿ ವನವಾಸಿಯಾಗಿ ಮುಂದೆ ಕನ್ನಡದ ನೆಲದಲ್ಲಿ ಬನವಾಸಿಯಾಯಿತು. ಹೀಗೆ ಅತ್ಯಂತ ಪ್ರಾಚೀನ ಕಾಲದಲ್ಲಿಯೂ ಯುಗಾಂತರಗಳಲ್ಲಿಯೂ ಇದು ರಾಜಧಾನಿಯಾಗಿ ಮೆರೆದ ಊರು.

No comments:

Post a Comment