ಪ್ರಜ್ಞೋತ್ತರಂ ಭೂಷಣಂ ಕದಂಬರ ಮಯೂರ
ಮಯೂರವರ್ಮ , ಆತನ ಮಗ ಕಂಗವರ್ಮ ಕಂಗವರ್ಮನ ತರುವಾಯ ಬಂದವನು ಬಗೀತಾರ್ಹ ಆಮೇಲೆ ರಘು ಆ ರಘುವಿನ ನಂತರ ಬಂದವನೇ ಕಾಕುಸ್ಥವರ್ಮ. ಕದಂಬ ರಾಜರುಗಳಲ್ಲಿ ಈ ಕಾಕುಸ್ಥವರ್ಮ ಪ್ರಸಿದ್ಧಿಯನ್ನು ಪಡೆದಿದ್ದ.
ಭ್ರಾತಾಸ್ಯ ಚಾರುವಪುರಬ್ದ ಗಭೀರನಾದೋ ಮೋಕ್ಷ ತ್ರಿವರ್ಗ ಪಟುರನ್ವಯ ವತ್ಸಲಶ್ಚ |
ಭಾಗೀರಥಿರ್ನರಪತಿರ್ಮೃಗರಾಜ ಲೀಲಃ ಕಾಕುಸ್ಥ ಇತ್ಯವನಿಮಂಡಲಘುಷ್ಟಕೀರ್ತಿಃ ||
ಭಾಗೀರಥಿರ್ನರಪತಿರ್ಮೃಗರಾಜ ಲೀಲಃ ಕಾಕುಸ್ಥ ಇತ್ಯವನಿಮಂಡಲಘುಷ್ಟಕೀರ್ತಿಃ ||
ಅತ್ಯಂತ ಬುದ್ಧಿವಂತನಾದ ಕಾಕುಸ್ಥವರ್ಮ ಅಷ್ಟೇ ಬಲಶಾಲಿಯಾಗಿದ್ದ. ಹಾಗೆ ನೋಡಿದರೆ ಕದಂಬ ರಾಜರುಗಳ ಸಂಸ್ಕಾರವೇ ಹಾಗಿತ್ತೋ ಏನೋ ಪರಾಕ್ರಮದಲ್ಲಿಯೂ ಸಹ ಮುಂದಿರುತ್ತಿದ್ದ ಕದಂಬರಾಜರು ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿಯೂ ಅಷ್ಟೇ ಮುಂದಿದ್ದರು. ಮೋಕ್ಷ ತ್ರಿವರ್ಗ ಪಟುರನ್ವಯ ವತ್ಸಲರಾಗಿದ್ದರು. ಅದೇ ಕದಂಬ ಕಾಕುಸ್ಥವರ್ಮನು - ಭಾಗೀರಥಿರ್ನರಪತಿರ್ಮೃಗರಾಜ ಲೀಲಃ ನಾಗಿದ್ದ, ಹೀಗೇ ಈ ಭೂಮಂಡಲದಲ್ಲಿ ಕೀರ್ತಿಯನ್ನು ಹೊಂದಿದ್ದ.
ಜ್ಯಾಯೋಭಿಸ್ಸಹ ವಿಗ್ರಹೋರ್ಥಿಷು ದಯಾ ಸಮ್ಯಕ್ ಪ್ರಜಾಪಾಲನಂ ದೀನಾಭ್ಯುದ್ಧರಣಂ ಪ್ರಧಾನವಸುಭಿರ್ಮುಖ್ಯ ದ್ವಿಜಾಭ್ಯರ್ಹಣಮ್ |
ಯಸೈತತ್ಕುಲಭೂಷಣಸ್ಯ ನೃಪತೇಃ ಪ್ರಜ್ಞೋತ್ತರಂ ಭೂಷಣಂ ತಂಭೂಪಾಷ್ಖಲು ಮೇನಿರೇ ಸುರಸಖಂ ಕಾಕುಸ್ಥಮತ್ರಾಗತಮ್ ||
ಯಸೈತತ್ಕುಲಭೂಷಣಸ್ಯ ನೃಪತೇಃ ಪ್ರಜ್ಞೋತ್ತರಂ ಭೂಷಣಂ ತಂಭೂಪಾಷ್ಖಲು ಮೇನಿರೇ ಸುರಸಖಂ ಕಾಕುಸ್ಥಮತ್ರಾಗತಮ್ ||
ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಪ್ರಜೆಗಳ ಸುಖವನ್ನೇ ಅಭಿಲಾಶಿಸುತ್ತಿದ್ದ ಮತ್ತು ರಾಜಧರ್ಮದ ಪ್ರತಿಪಾಲನೆಗೆ ಕಟಿಬದ್ಧನಾಗಿದ್ದ ಕಾಕುಸ್ಥನು ದೀನ ಜನರ ಉದ್ಧಾರಕ್ಕಾಗಿ ಈ ಭೂಮಂಡಲದ ರಕ್ಷಣೆಗಾಗಿ ಬ್ರಾಹ್ಮಣ್ಯವನ್ನು ಎತ್ತಿ ಹಿಡಿದಿದ್ದ. "ಯಸೈತತ್ಕುಲಭೂಷಣಸ್ಯ ನೃಪತೇಃ ಪ್ರಜ್ಞೋತ್ತರಂ ಭೂಷಣಂ" ಎನ್ನುವ ಮಾತು ಈ ಕಾಕುಸ್ಥನಿಗೆ ಅನ್ವರ್ಥವಾಗಿತ್ತು.
ಈ ಶ್ಲೋಕದ ಅಂದರೆ ಮೊದಲ ಶ್ಲೋಕ 10ನೇ ಸಾಲಿನ ಪೂರ್ವಾರ್ಧ ವಸಂತ ತಿಲಕಾ ದಲ್ಲಿ ಬರೆಯಲಾಗಿದ್ದು ಮುಂದಿನ ಹತ್ತನೇ ಸಾಲಿನ ಕೊನೆಯ ಅರ್ಧ ಮತ್ತು 11ನೇ ಸಾಲಿನ ಪೂರ್ವಾರ್ಧವು ಶಾರ್ದೂಲ ವಿಕ್ರೀಡಿತಾ ದಲ್ಲಿದೆ. (27ನೇ ಶ್ಲೋಕವು ವಸಂತ ತಿಲಕ ಮತ್ತು 28 ಶಾರ್ದೂಲ ವಿಕ್ರೀಡಿತದಲ್ಲಿದೆ)
ಈ ಶ್ಲೋಕದ ಅಂದರೆ ಮೊದಲ ಶ್ಲೋಕ 10ನೇ ಸಾಲಿನ ಪೂರ್ವಾರ್ಧ ವಸಂತ ತಿಲಕಾ ದಲ್ಲಿ ಬರೆಯಲಾಗಿದ್ದು ಮುಂದಿನ ಹತ್ತನೇ ಸಾಲಿನ ಕೊನೆಯ ಅರ್ಧ ಮತ್ತು 11ನೇ ಸಾಲಿನ ಪೂರ್ವಾರ್ಧವು ಶಾರ್ದೂಲ ವಿಕ್ರೀಡಿತಾ ದಲ್ಲಿದೆ. (27ನೇ ಶ್ಲೋಕವು ವಸಂತ ತಿಲಕ ಮತ್ತು 28 ಶಾರ್ದೂಲ ವಿಕ್ರೀಡಿತದಲ್ಲಿದೆ)
No comments:
Post a Comment