Search This Blog

Tuesday 31 October 2017

ವಿವಿಧ ಕಲಾ ಕುಶಲರ್ಪ್ರಜಾ ಪ್ರಿಯಶ್ಚ - ಕದಂಬ ರಾಜರುಗಳು


ಮಯೂರವರ್ಮನ ನಂತರ ಬಂದ ಕದಂಬ ರಾಜರುಗಳಲ್ಲಿ ಕಂಗವರ್ಮ ಈತನು ಮಯೂರನ ಮಗ, ಈತನ ನಂತರ ಬಂದವರಲ್ಲಿ ಸಂಪದ್ಭರಿತವಾದ ಇಡೀ ಭೂಮಂಡಲವನ್ನೇ ಆಳಲು ಸಮರ್ಥನೆನ್ನಿಸಿದ "ರಘು" ಎನ್ನುವ ರಾಜ ಪ್ರಮುಖನು.
ಅಥ ನೃಪತಿ ಮಹಿತಸ್ಯ ತಸ್ಯ ಪುತ್ರಃ ಪೃಥಿತ ಯಶಾ ರಘು ಪಾರ್ಥಿವ ಪೃಥಿವೀ ಶ್ರೀ |
ಪೃಥುರಿವ ಪೃಥಿವೀಂ ಪ್ರಸಹ್ಯ ಯೋsರೀನ್ ಅಕೃತ ಪರಾಕ್ರಮತ ಸ್ಸ್ವವಂಶ ಭೋಜ್ಯಾಮ್ ||
ಸೂರ್ಯವಂಶದಲ್ಲಿ ಅನರಣ್ಯ ಎನ್ನುವ ಒಬ್ಬ ದೊರೆ ಇದ್ದ. ಆತ ಪ್ರಜಾ ಪೀಡಕನಾಗಿ ಸ್ವಾರ್ಥಿಯಾಗಿ ಅಹಂಕಾರದಿಂದ ಮೆರೆಯುತ್ತಿದ್ದ ಆತನ ಕ್ರೂರತೆ ಎಷ್ಟಿಂತ್ತೆಂದರೆ ಇಡೀ ಭೂಮಂಡಲದ ಸಸ್ಯವರ್ಗಗಳು ಮತ್ತು ಪ್ರಾಣಿಗಳು ತಮ್ಮ ಜೀವ ಕಳೆದುಕೊಂಡಿದ್ದವು. ಇಂತಹ ಸಮಯದಲ್ಲಿ ಜನರೆಲ್ಲಾ ಸೇರಿ ಆತನನ್ನು ಕಲ್ಲಿನಿಂದ ಹೊಡೆದು ಕೊಲ್ಲುತ್ತಾರೆ. ಆಮೇಲೆ ಅವನ ಮೂಳೆಯನ್ನು ಕಡೆದಾಗ ಹುಟ್ಟುವ ಮಗುವೇ ಪೃಥು ಈ ಪೃಥುವು ಹುಟ್ಟಿದಾಕ್ಷಣ ಇಡೀ ಭೂಮಂಡಲದಲ್ಲಿ ಮಳೆಯಾಗಿ ಹಸಿರು ಕಂಗೊಳಿಸಿ ಜನರೆಲ್ಲಾ ನಿಟ್ಟುಸಿರು ಬಿಡುತ್ತಾರೆ. ಈ ಪೃಥುವಿನಿಂದ ಪುನಃ ಈ ಭೂಮಿತನ್ನ ಜೀವಕಳೆ ಪಡೆದದ್ದಕ್ಕಾಗಿ ಈ ಭೂಮಿಗೆ ಪೃಥಿವೀ ಎನ್ನುವ ಹೆಸರು ಬರುತ್ತದೆ. ಎಂದು ಓದಿದ ನೆನಪು. ಇಲ್ಲಿ ಶಾಸನ ಕವಿ ಕದಂಬ ರಾಜರಿಗೆ ಈ ಪೃಥುವಿನಂತೆ ಈ ಭೂಮಂಡಲವನ್ನು ಪುನಃ ಸಂಪದ್ಭರಿತವನ್ನಾಗಿ ಮಾಡಿದರು ಎನ್ನುವ ರೀತಿಯಲ್ಲಿ ಸಾಹಸ ಶೌರ್ಯಗಳನ್ನು ಹೇಳುತ್ತಾನೆ.
ಪ್ರಥಿತ ಭಯ ಸಮರೇಶ್ವರಾತಿ ಶಸ್ತ್ರೋಲ್ಲಿಖಿತ ಮುಖೋsಭಿಮುಖದ್ವಿಷಾಂ ಪ್ರಹರ್ತ್ತಾ |
ಶ್ರುತಿಪಥನಿಪುಣಷ್ಕವಿಃ ಪ್ರದಾತಾ ವಿವಿಧ ಕಲಾ ಕುಶಲರ್ಪ್ರಜಾ ಪ್ರಿಯಶ್ಚ ||
ಮುಖಕ್ಕೆ ಮುಖ ಕೊಟ್ಟು ಯುದ್ಧ ಮಾಡುವ ಸಮರ್ಥರು ಈ ಕದಂಬ ಕುಲದ ರಾಜರುಗಳು, ಸ್ಮೃತಿ ಮತ್ತು ಶ್ರುತಿಗಳಲ್ಲಿ ನೈಪುಣ್ಯತೆ ಹೊಂದಿದ ಶಸ್ತ್ರ ಮತ್ತು ಶಾಸ್ತ್ರಗಳಿಗೆ ಸಮಾನವಾದ ಗೌರವಗಳನ್ನು ಕೊಡತಕ್ಕವರು ಈ ಕದಂಬ ರಾಜ್ಯದಲ್ಲಿದ್ದರು ಮತ್ತು ವಿವಿಧ ಕಲೆಗಳಲ್ಲಿ ನಿಪುಣರಾದ ಕವಿಗಳು ಕಲಾವಿದರ ಒಂದು ವರ್ಗವೇ ಈ ರಾಜ್ಯದಲ್ಲಿದ್ದು ಈ ರಾಜರುಗಳೆಲ್ಲಾ ಪ್ರಜೆಗಳ ಅತ್ಯಂತ ಪ್ರೀತಿ ಪಾತ್ರರಾಗಿದ್ದರು ಎಂದು ಈ ಶಾಸನದ ಸಾಲುಗಳು ಹೇಳುತ್ತವೆ.
ಇಲ್ಲಿನ ತನಕ ಈ ಶಾಸನವು ಅಂದರೆ ಮೊದಲ ಸಾಲಿನಿಂದ 8ನೇ ಸಾಲು ಅಂದರೆ ಅಲ್ಲಿಗೆ 24 ಶ್ಲೋಕಗಳನ್ನು ಮಿಶ್ರಗೀತಿಕಾ ದಲ್ಲಿ ಬರೆಯಲಾಗಿದ್ದು ಮುಂದೆ ಈ ಸಾಲು ಅಂದರೆ 25 ಮತ್ತು 26ನೇ ಶ್ಲೋಕವನ್ನು ಪುಷ್ಪಿತಾಗ್ರದಲ್ಲಿ ಬರೆಯಲಾಗಿದೆ.


No comments:

Post a Comment