Search This Blog

Friday 11 October 2019

ಶಂ ನೋ ದೇವೀರಭೀಷ್ಟಯ . . . .

ಶಂ ನೋ ದೇವೀರಭೀಷ್ಟಯ ಆಪೋ ಭವಂತು ಪೀತಯೇ |
ಶಂ ಯೋರಭಿ ಸ್ರವಂತು ನಃ ||
ಹೌದು ನೀರು ಸ್ವಚ್ಚವಾಗಿದ್ದರೆ ಕಲ್ಮಶರಹಿತವಾಗಿದ್ದರೆ ಅವು ರೋಗ ನಿರೋಧಕಗಳಾಗಿ ಕಾರ್ಯ ನಿರ್ವಹಿಸುತ್ತವಂತೆ. ನೀರು ದೇಹದಲ್ಲಿ ಪ್ರಮಾಣಕ್ಕಿಂತ ಕಡಿಮೆಯಾದರೂ ರೋಗದ ತೀವ್ರತೆ ಅಧಿಕವಾಗುತ್ತದೆಯಂತೆ. ಜೀರ್ಣ ಮತ್ತು ಅಜೀರ್ಣಕ್ಕೂ ಇದೇ ನೀರು ಅತ್ಯಂತ ಅವಶ್ಯವಂತೆ. ಪಚನಕ್ರಿಯೆ ನಡೆಯಲೂ ನೀರು ಬೇಕೇ ಬೇಕು ಎನ್ನುವ ಭಾವದೊಂದಿಗೆ ಶಂ ನೋ - ಒಳ್ಳೆಯದಾಗಲಿ ಎನ್ನುತ್ತದೆ. ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ರೋಗಕಾರಕ ಕ್ರಿಮಿಗಳಿಂದ ನಮಗೆ ಹಾನಿ ಉಂಟಾಗದಿರಲಿ ಎನ್ನುವ ಋಕ್ಕಿನ ಆಶಯ ಬಹಳ ಮಹತ್ವದ್ದು. ನಾವು ಕುಡಿಯುವ ನೀರು ಕುಡಿಯಲು ಯೋಗ್ಯವಾಗಿರುವಂತೆ ದೊರಕಿಸಿಕೊಡಿ ಎನ್ನುವ ಮಾತು ನಿಜಕ್ಕೂ ಸೂರ್ಯ ಚಂದ್ರರಿರುವ ತನಕವೂ ಸತ್ಯದ್ದು.

ನೀರು ನಮಗೆ ಎಷ್ಟು ಮುಖ್ಯ ಎನ್ನುವುದನ್ನು ಅತ್ಯಂತ ಸ್ವಾರಸ್ಯಕರವಾಗಿ ಹೇಳುವ ಋಕ್ಕು ಋಗ್ವೇದದಲ್ಲಿದೆ. ಅಲ್ಲಿ ಮನುಷ್ಯನಿಗೆ ಬರತಕ್ಕ ಹೆಚ್ಚಿನ ಎಲ್ಲಾ ರೋಗಗಳನ್ನೂ ನೀರಿನ ಮಾಧ್ಯಮದಿಂದಲೇ ಗುಣಪಡಿಸಬಹುದು ಎನ್ನುವುದಲ್ಲದೇ ನಮ್ಮ ಆಹಾರ ನಮಗೆ ಸಸಿಗಬೇಕಿದ್ದರೆ ಅಗ್ನಿ ಬಹಳ ಮುಖ್ಯ. ಆದರೆ ಅಗ್ನಿಯ ಮಧ್ಯವರ್ತಿ ಇದೇ ನೀರು ಎನ್ನುತ್ತಾನೆ ಋಗ್ವೇದದ ಹತ್ತಬನೇ ಮಂಡಲದ ಒಂಬತ್ತನೇ ಸೂಕ್ತದಲ್ಲಿ.
ಅಪ್ಸು ಮೇ ಸೋಮೋ ಅಬ್ರವೀದಂತರ್ವಿಶ್ವಾನಿ ಭೇಷಜಾ |
ಅಗ್ನಿಂ ವಿಶ್ವಶಂಭುವಂ || ಎನ್ನುವಲ್ಲಿನ ಅಗ್ನಿಂ ವಿಶ್ವಶಂಭುವಂ ಎನ್ನುವಲ್ಲಿನ ಜಗನ್ನಿರ್ಮಾತೃ ಅಗ್ನಿ ಎನ್ನುವ ಭಾವ ಕಾಣಸಿಗುತ್ತದೆ.

#ವೇದಲ್ಲಿ_ನೀರು

No comments:

Post a Comment