Search This Blog

Wednesday 20 September 2017

ತಕ್ಷಶಿಲೆಯ ಭಾಗವತ ಹೆಲಿಯೋಡೋರಸ್

ತಕ್ಷಶಿಲೆಯ ಭಾಗವತ ಹೆಲಿಯೋಡೋರಸ್
ಹೆಲಿಯೋಡೋರಸ್ ಗರುಡಗಂಬವು ಕ್ರಿ.ಪೂ. ೧೧೩ ರ ಸುಮಾರಿಗೆ ಮಧ್ಯ ಭಾರತದ ವಿದಿಶಾದ ಇಂದಿನ ಬೆಸ್ನಗರದ  ಹತ್ತಿರ ಶುಂಗ ದೊರೆ  ಭಾಗಭದ್ರನ ಆಸ್ಥಾನದಲ್ಲಿನ ಇಂಡೋ-ಗ್ರೀಕ್   ದೊರೆಯಾದ  ಅಂತಲಿಕಿತ ಅಥವಾ ಆಂಟಿಯಾಲ್ಕಿಡಾಸ್ನ  ರಾಯಭಾರಿ ಹೆಲಿಯೋಡೋರಸ್  ಎಂಬಾತನು ಸ್ಥಾಪಿಸಿದ ಕಲ್ಲಿನ ಕಂಬವಾಗಿದೆ. ಈ ಜಾಗವು ಸಾಂಚಿಯ ಬೌದ್ಧ ಸ್ತೂಪದಿಂದ ಕೇವಲ ಐದು ಮೈಲಿಗಳ ಅಂತರದಲ್ಲಿದೆ.
ಕಂಬದ ಮೇಲುಗಡೆ ಗರುಡನ ಕೆತ್ತನೆ ಇದ್ದು, ಇದನ್ನು  ಹೆಲಿಯೋಡೋರಸ್ ನು   ದೇವನಾದ ವಾಸುದೇವನಿಗೆ  ಅರ್ಪಿಸಿದ್ದಾನೆ . ಇದು  ವಾಸುದೇವ ಮಂದಿರದ ಎದುರಿಗೆ ಇದೆ.
ಗರುಡಗಂಬದ ಮೇಲೆ ಎರಡು ಶಾಸನಗಳಿವೆ .
ಇದು  ಬ್ರಾಹ್ಮಿ ಲಿಪಿಯಲ್ಲಿದ್ದು  ಹೆಲಿಯೋಡೋರಸ್ , ಇಂಡೋ-ಗ್ರೀಕ್ ರಾಜ್ಯ , ಮತ್ತು ಶುಂಗ ಸಾಮ್ರಾಜ್ಯದೊಂದಿಗಿನ ಅವನ ಸಂಬಂಧದ  ಕುರಿತಾಗಿದೆ.
ತನ್ನ ಆಳಿಕೆಯ ಹದಿನಾಲ್ಕನೇ ವರ್ಷದಲ್ಲಿ ವರ್ಧಮಾನನಾಗಿರುವ ತ್ರಾತಾರನಾದ ಕಾಶೀಪುತ್ರ ಭಾಗಭದ್ರ ರಾಜನ ಹತ್ತಿರ ಅಂಟಾಲಿಕಿಡಾಸ್ ಮಹಾರಾಜನಿಂದ ಕಳುಹಿಸಲ್ಪಟ್ಟವನಾಗಿ ಯವನದೂತನಾಗಿ ಬಂದ, ಡಿಯಾನ್ ಎಂಬವನ ಮಗನಾದ, ತಕ್ಷಶಿಲೆಯ ನಿವಾಸಿಯಾದ, ಭಾಗವತನಾದ ಹೆಲಿಯೋಡೋರ್ ನಿಂದ ದೇವದೇವನಾದ ವಾಸುದೇವನಿಗೆ ಈ ಗರುಡಧ್ವಜವು ಸ್ಥಾಪಿಸಲ್ಪಟ್ಟಿತು.
ಇಲ್ಲಿ ಸ್ಪಷ್ಟವಾಗಿರದಿದ್ದರೂ ಕೂಡ ಈ ಶಾಸನವು , ಹೆಲಿಯೋಡೋರಸ್ ನು ಒಬ್ಬ ಭಾಗವತ ಅಂದರೆ 'ಭಗವಂತನ ಭಕ್ತ'ನು ಎಂದು ಸೂಚಿಸುತ್ತದೆ.
ಕಂಬದ ಮೇಲಿನ ಎರಡನೇ ಶಾಸನವು ಹೆಲಿಯೋಡೋರಸ್ ನ ನಂಬುಗೆಯ ಧರ್ಮದ ಆಧ್ಯಾತ್ಮಿಕ ತಿರುಳನ್ನು ವಿಸ್ತಾರವಾಗಿ ವಿವರಿಸುತ್ತದೆ.
ಹೆಲಿಯೋಡೋರಸ್  ಮತ್ತು  ಸಮಕಾಲೀನ  ಅಗತೋಕ್ಲಸ್  ಇವರುಗಳು ಹಿಂದೂಧರ್ಮದ  ವೈಷ್ಣವ ಪಂಥಕ್ಕೆ  ದಾಖಲಾದ ಪ್ರಾಚೀನ ಮತಾಂತರಿಗಳು ಎನ್ನಬಹುದು.  ಕೆಲವು ಇತಿಹಾಸದ ವಿದ್ವಾಂಸರ ಅಬಿಪ್ರಾಯದಂತೆ ಅವನನ್ನು  ಇವತ್ತಿಗೂ ಇರುವ ಶಿಲಾಸ್ತಂಭವೊಂದ ಸ್ಥಾಪಕನಾಗಿರುವನಾದರೂ ಭಾಗವತ-ಕೃಷ್ಣ ಪಂಥಕ್ಕೆ ಮತಾಂತರಗೊಂಡ ಮೊದಲ ಮತಾಂತರಿ ಎನ್ನುವುದು ಸರಿಯಾಗುವುದಿಲ್ಲ. ಅವನನ್ನು ರಾಯಭಾರಿಯನ್ನಾಗಿ  ಕಳಿಸಿದ ರಾಜನೂ ಸೇರಿ ಅನೇಕ ಜನರು ಕೂಡ ಭಾಗವತ ಸಂಪ್ರದಾಯದ ಅನುಯಾಯಿಗಳೇ ಆಗಿದ್ದರು.
ಅಂತಲಿಕಿತ

ಅಥವಾ ಆಂಟಿಯಾಲ್ಕಿಡಾಸ್ ಇಂಡೋಗ್ರೀಕ್ ಪಂಗಡದ ಯೂಕ್ರಟೈಡಿಯನ್ ಮನೆತನಕ್ಕೆ ಸೇರಿದ ದೊರೆ (ಕ್ರಿ. ಪೂ 115-100). ಪ್ರಸಿದ್ಧವಾದ ಬೆಸ್ನಗರದ ಗರುಡಧ್ವಜದ ಮೇಲಿರುವ ಶಾಸನದಲ್ಲಿ ಈ ದೊರೆಯನ್ನು ಕುರಿತ ಉಲ್ಲೇಖ ಇದೆ. ಇದರ ಪ್ರಕಾರ ಹೆಲಿಯೋಡೋರಸ್ ಎಂಬ ತಕ್ಷಶಿಲೆಯ ಯವನನು ವೈಷ್ಣವ ಧರ್ಮಕ್ಕೆ ಮನಸೋತು ಭಾಗವತನಾಗಿ, ಭಾಗಭದ್ರ ಎಂಬ ದೊರೆಯ ಆಸ್ಥಾನಕ್ಕೆ ಅಂತಲಿಕಿತನಿಂದ ರಾಯಭಾರಿಯಾಗಿ ಕಳುಹಿಸಲ್ಪಟ್ಟನೆಂದು ತಿಳಿಯಬರುತ್ತದೆ. ಬಹುಶಃ ಅಂತಲಿಕಿತ ತಕ್ಷಶಿಲೆಯಲ್ಲಿಯೇ ರಾಜ್ಯವಾಳುತ್ತಿದ್ದನೆಂದು ಊಹಿಸಬಹುದು. ಅಂತಲಿಕಿತ ಮೀನಾಂಡರನ ಮೇಲೆ ಯುದ್ಧ ಮಾಡುವ ಸಲುವಾಗಿ ಭಾಗಭದ್ರ ಎಂಬ ಭಾರತೀಯ ರಾಜನ ಸಹಾಯ ಮತ್ತು ಸ್ನೇಹವನ್ನು ಬಯಸಿರಬೇಕು. ಅಂತಲಿಕಿತನ ನಾಣ್ಯಗಳಲ್ಲಿ ರಾಜನ ಚಿತ್ರ, ಆನೆ ಮತ್ತು ಖರೋಷ್ಠೀಲಿಪಿಯಲ್ಲಿ ‘ಮಹಾರಾಜಸ ಜಯಧರಸ ಅಂತಿಯಲಿಖಿತಸ’ ಎಂಬ ಬಹಗಳಿವೆ.


No comments:

Post a Comment