Search This Blog

Saturday 10 September 2016

ಸುಮನಸಾಂ ಮನಸಾಮಕಸ್ಮಾದಸ್ಮಾದಕಾಲ ಕಲಿಕಾಲ ವಿರಾಮ ಶಂಕಾಂ - ಖಜುರಾಹೋ

ಕ್ರಿ.ಶ. ೯೫೦ ರಿಂದ ೧೦೫೦ ರ ವರೆಗೆ ಆಳಿದ ಚಂಡೇಲ ವಂಶದ ಅರಸರು ಖಜುರಾಹೋ ವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಇಲ್ಲಿನ ಇಡೀ ಪ್ರದೇಶ ಎ೦ಟು ದ್ವಾರಗಳಿದ್ದ ಕೋಟೆಯಿ೦ದ ಸುತ್ತುವರಿಯಲ್ಪಟ್ಟಿತ್ತು. ಪ್ರತಿ ದ್ವಾರದ ಎರಡು ಬದಿಯಲ್ಲಿಯೂ ಖರ್ಜೂರದ ವೃಕ್ಷಗಳಿದ್ದುದರಿಂದ ಈ ಸ್ಥಳಕ್ಕೆ "ಖಜುರಾಹೊ" ಎಂಬ ಹೆಸರು ಬ೦ದಿತೆ೦ದು ಹೇಳಲಾಗುತ್ತದೆ.  ಯಶೋವರ್ಮನ ಕಾಲದಲ್ಲಿದ್ದ ಮಾಧವನೆನ್ನುವ ಸಂಸ್ಕೃತ ಕವಿಗೆ ದೆದ್ದನೆನ್ನುವವನು ಪ್ರಶಸ್ತಿಯನ್ನು ನೀಡಿದ ಕುರಿತು ಈ ದೇವಾಲಯದಲ್ಲಿರುವ ಶಾಸನ ಒಂದರಲ್ಲಿ ಹೇಳಲಾಗಿದೆ. ಅತ್ಯಂತ ಸುಂದರವಾದ ಪದಗಳನ್ನು ಪೋಣಿಸಿ ರಚಿಸಿದ ಈ ಶಾಸನ ಸಾಹಿತ್ಯಾಸಕ್ತರಿಗೆ ಅತ್ಯಂತ ಮಹತ್ವದ್ದು, ಇಲ್ಲಿ ಇನ್ನೊಂದು ಮುಖ್ಯ ವಿಶೇಷವೆಂದರೆ ಸಂಸ್ಕೃತ ಭಾಷೆಯನ್ನು ಕುರಿತು ಕವಿ ಜಯಗಣ ನ ಮಗನನ್ನು ಸಂಸ್ಕೃತಭಾಷಾ ವಿದುಷ ಎಂದು ಬಣ್ಣಿಸಿದ್ದಾರೆ. ಒಂದು ಭಾಷೆಯ ಕುರಿತು ಅಭಿಮಾನದಿಂದ ಹೇಳಿರುವುದು ಶಾಸನ ಇತಿಹಾಸದಲ್ಲಿ ತುಂಬಾ ವಿರಳ. ಖಂಡರಿಸಿರುವ ಅಕ್ಷರವನ್ನು ಕುರಿತಾಗಿಯೂ ಸಹ ರುಚಿರಾಕ್ಷರ ಎಂದು ಹೊಗಳಿಕೊಂಡದ್ದು ನಾಗರಿಲಿಪಿಯ ಬಗ್ಗೆ ಅವರಿಗಿದ್ದ ಅಭಿಮಾನವನ್ನು ತೋರಿಸುತ್ತದೆ. ಇಲ್ಲಿ ರುಚಿರಾಕ್ಷರ ಎನ್ನುವುದು ಪ್ರಶಸ್ತಿಯನ್ನು ಕುರಿತಾಗಿಯೂ ಹೇಳಿರುವ ಸಾಧ್ಯತೆ ಇದೆ.ಭಾಷೆ ಮತ್ತು ಲಿಪಿ ಯ ಜೊತೆಗೆ ಗೌರವಕ್ಕೆ ಪಾತ್ರನಾದ ಮಾಧವನು ಬೇರೆ ಬೇರೆ ಕೃತಿಗಳನ್ನು ಬರೆದವನು.
ಆದರೆ ಇದಕ್ಕೂ ಮೊದಲು ಸುಮಾರು ಕ್ರಿ ಶ ೬೯೯ರಲ್ಲಿ ಬಾದಾಮಿಯಲ್ಲಿ ವಿಜಯಾದಿತ್ಯ ಎನ್ನುವ ಚಾಲುಕ್ಯ ವಂಶದ ರಾಜನೊಬ್ಬ ಒಂದು ಶಾಸನ ಬರೆಸಿದಾಗ ಆ ಶಾಸನದಲ್ಲಿನ ೯ ಸಾಲುಗಳನ್ನು ಸಂಸ್ಕೃತ ಭಾಷೆಯಲ್ಲಿಯು ೧೦ನೇ ಸಾಲಿನಿಂದ ಕನ್ನಡದಲ್ಲಿ ಬರೆಸಿದ. ಆಗ ೧೦ನೇ ಸಾಲಿನಲ್ಲಿ ಅತಃ ಪರಂ ವರ್ಣಾನ್ಯೇತಾನಿ ಪ್ರಾಕೃತ ಭಾಷಾಯಾಂ ಎಂದು ಹೇಳಿಕೊಳ್ಳಲಾಗಿದೆ. ಆದರೆ ನಿರ್ದಿಷ್ಟವಾಗಿ ಕನ್ನಡವನ್ನು ಹೇಳದೇ ಇದ್ದರೂ ಸಹ ಭಾಷೆಯ ಬಗ್ಗೆ ಹೇಳಿದ್ದಾನೆ. ಅಕ್ಷರವನ್ನು ಕುರಿತಾಗಿ ಮತ್ತು ಕವಿಯನ್ನು ಹೆಸರಿಸಿದ್ದಿಲ್ಲ. ಖಜುರಾಹೋ ಶಿಲ್ಪಕಲೆಗಳಲ್ಲಿ ವೈಶಿಷ್ಟ್ಯವನ್ನು ಹೊಂದಿದ್ದಲ್ಲದೇ ಭಾಷಾ ಜ್ಞಾನದ ಕುರಿತಾಗಿ ಉಲ್ಲೇಖಿಸಿದ ಮಹತ್ವದ ದೇವಾಲಯ.
ಯಸ್ತ್ಯಾಗ ವಿಕ್ರಮ ವೆವೇಕ ಕಲಾ ವಿಲಾಸ ಪ್ರಜ್ಞಾಪ್ರತಾಪ ವಿಭವ ಪ್ರಭವಶ್ಚರಿತ್ರಾತ್ ಚಕ್ರೇ ಕೃತೀ
ಸುಮನಸಾಂ ಮನಸಾಮಕಸ್ಮಾದಸ್ಮಾದಕಾಲ ಕಲಿಕಾಲ ವಿರಾಮ ಶಂಕಾಂ
ಶಬ್ದಾನುಶಾಸನ ವಿದಾಪಿತ್ರಮಾನ್ತ್ರ್ಯ ಡತ್ತ ದದ್ದೇನ ಮಾದವ ಕವಿಃ ಸ ಇಮಾಂ ಪ್ರಶಸ್ತಿಂ
ಯಸ್ಯಾಮಲಂಕ ವಿಯಶಃ ಕೃತಿನಃ ಕಯಾಸು ರೋಮಾಂಚ ಕಂಚಕ ಜುಷಃ ಪರಿಕೀರ್ತಯನ್ತೀ
ಸಂಸ್ಕೃತ ಭಾಷಾ ವಿದುಷಾ ಜಯಗುಣ ಪುತ್ರೇಣ ಕೌತುಕಾ ಲಿಖಿತಾ

ರುಚಿರಾಕ್ಷರಾ ಪ್ರಶಸ್ತಿಃ ಕರಣಿಕ ಜದ್ದೇನ ಗೌಡೇನ





No comments:

Post a Comment