೧೬೦೪ನೇ ಇಸವಿಯಲ್ಲಿ ಕೊಂಡಕುಂದಾನ್ವಯ ವಂಶದ ಚಾರು ಕೀರ್ತಿ ಪಂಡಿತನ ಶಿಷ್ಯನೇ ಸಂಗೀತಪುರದ
ಅಕಲಂಕದೇವ. ಎರಡನೇ ನಾಗವರ್ಮ ಮತ್ತು ಕೇಶಿರಾಜನ ನಂತರದ ಕನ್ನಡ
ವಯ್ಯಾಕರಣಿಕರಲ್ಲಿ ಭಟ್ಟಾಕಲಂಕ ವಿಶಿಷ್ಟವಾದ ಸ್ಥಾನವನ್ನು ಹೊಂದಿದ್ದಾನೆ. ಕನ್ನಡದ ವ್ಯಾಕರಣವನ್ನು ಸಂಸ್ಕೃತದಲ್ಲಿ
ಬರೆದ ಭಟ್ಟಾ ಕಲಂಕದೇವನು ಭಾಷೆಯೊಂದು ಜಾಗತಿಕ ಮಟ್ಟದಲ್ಲಿ
ಪ್ರಸಾರಗೊಳ್ಳಲಿ ಎನ್ನುವ ಮಹತ್ವಾಕಾಂಕ್ಷೆ ಹೊಂದಿದ್ದ ಎನ್ನುವುದು ಅವನ ಕೆಲಸದಿಂದ ತಿಳಿದು
ಬರುತ್ತದೆ. ಈಗಿನ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡುವಳ್ಳಿ
ಜೈನ ಕೇಂದ್ರವಾಗಿದ್ದು ಅಲ್ಲಿ ಭಟ್ಟಾಕಲಂಕ ಇದ್ದಿರುವುದರಿಂದ ಭಟ್ಕಳ ಎನ್ನುವ ಹೆಸರು ಬಂತು
ಎನ್ನುವುದು ರೂಢಿ ಒಬ್ಬ ಕವಿಯ ಹೆಸರನ್ನೇ ಒಂದು ಊರು ಹೊಂದಿತು ಎನ್ನುವುದಾದರೆ ಅದಕ್ಕಿಂತ
ದೊಡ್ದ ಭಾಗ್ಯ ಸಾಹಿತ್ಯ ಲೋಕಕ್ಕೆ ಬೇರೆ ಇರಲಾರದು.
ಇದು ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂದಾದಲ್ಲಿರುವ ಶಾಸನವೊಂದರಿಂದ
ತೆಗೆದುಕೊಂಡಿದ್ದೇನೆ.
No comments:
Post a Comment