ಕನ್ನಡದ ನೆಲದಲ್ಲಿ
ತನ್ನ ಅಧಿಪತ್ಯವನ್ನು ಸ್ಥಾಪಿಸಿದ “ಇದಂ ಬ್ರಾಹ್ಮಂ ಇದಂ ಕ್ಷಾತ್ರಂ ಶಾಪಾದಪಿ ಶರಾದಪಿ” ಎನ್ನುವುದನ್ನು
ಕ್ರಿಯಾತ್ಮಕವಾಗಿ ತೋರಿಸಿದ ಮಹಾ ಮೇಧಾವಿ ಕದಂಬವಂಶದ ಮಯೂರ ವರ್ಮ. ಈತನ
ಬಗ್ಗೆ ಈತನ ಹೆಸರನ್ನು ಅಧಿಕೃತವಾಗಿ ಸೂಚಿಸುವಂತಹ ಶಾಸನವೇ ಇಲ್ಲ ಎನ್ನಬಹುದು. ಆದರೆ ಇದಕ್ಕೆ
ಅಪವಾದ ಎನ್ನುವಂತೆ ಚಿತ್ರದುರ್ಗ ಜಿಲ್ಲೆಯ ಚಂದ್ರವಳ್ಳಿಯ ಈ ಶಾಸನ ಮಯೂರವರ್ಮನು
ಕೆರೆಯನ್ನು ಕಟ್ಟಿಸಿದ ಬಗೆಗಿನ ಉಲ್ಲೇಖವಿದೆ. ಸಂಸ್ಕೃತ ಪ್ರಬುದ್ಧ ವಿದ್ವಾಂಸನಾದ ಮಯೂರವರ್ಮನ
ತರುವಾಯ ಬಂದ ಅರಸರೆಲ್ಲಾ ಶಾಸನ ಸಾಹಿತ್ಯವನ್ನು ಗಮನದಲ್ಲಿರಿಸಿಕೊಂಡದ್ದು ಕಾಣಬರುತ್ತದೆ. ಕದಂಬರ
ಕುರಿತಾಗಿ ಅನೇಕ ವಿಸ್ಮಯಕಾರ್ರಿ ವಿಷಯಗಳು ಅನೇಕ ವಿಧದಲ್ಲಿ ಸಿಗುತ್ತವೆ. ಕ್ರಿ. ಶ
೩ನೇ ಶತಮಾನದ ಸುಮಾರಿನ ಸಂಸ್ಕೃತದ ಈ ಶಾಸನ ಬ್ರಾಹ್ಮೀ ಲಿಪಿಯಲ್ಲಿದೆ.
No comments:
Post a Comment