Search This Blog

Thursday 22 September 2016

ಸಾಧುಪ್ರಿಯನ್ - ಅಸಾಧು ಜನ ವರ್ಜಿತನ್ - ಉಡುಪಿ ಜಿಲ್ಲೆಯ ಉದ್ಯಾವರ

ಸುಮಾರು ೮ ನೇ ಶತಮಾನದಲ್ಲಿ ಖಂಡರಿಸಲಾದ ಕಪ್ಪೆ ಅರಭಟ್ಟನ ಶಾಸನ, ಶಾಸನ ಇತಿಹಾಸದಲ್ಲಿಯೆ ದೊಡ್ದ ಮೈಲಿಗಲ್ಲನ್ನು ಸ್ಥಾಪಿಸಿತು. ಸಾಹಿತ್ಯದ ಅನೇಕ ಅಂಶಗಳನ್ನು ತನ್ನಲ್ಲಿ ಹೊದ್ದು ಮೈದಳೆದ ಈ ಶಾಸನ ಯಾರ ಕುರಿತಾಗಿ ಬರೆಯಲಾಗಿದೆ. ಮತ್ತು ಇದರಲ್ಲಿ ರೋದನ ಮತ್ತು ಕಿಚ್ಚು ಯಾಕಾಗಿ ಅನ್ನುವುದೂ ಸಹ ಸುಲಭವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಅನೇಕರು ಅನೇಕ ವಿಧವಾಗಿ ವಿಶ್ಲೇಶಿಸಿದರೂ ಸಹ ಒಮ್ಮತದ ಅಭಿಪ್ರಾಯ ಬಹಳ ಕಡಿಮೆಯೇ ಸರಿ. ಒಂದು ಕಡೆ ತಾನು ಒಳ್ಳೆಯ ಜನರಿಗೆ ಒಳ್ಳೆಯವನಾಗಿಯೂ ದುರ್ಜನರಿಗೆ ಕೆಟ್ಟವನಾಗಿದ್ದೇನೆ ಅಂತ ಹೇಳಿಕೊಳ್ಳುತ್ತಾನೆ. ಇನ್ನೊಂದೆಡೆ ದಿನವೂ ಅವಮಾನದಿಂದ ಬದುಕುವುದಕ್ಕಿಂತ ಸಾಯುವುದೇ ಲೇಸು ಅನ್ನುತ್ತಾನೆ. ಇನ್ನೊಂದೆಡೆ ನಾನು ಬಲಿಷ್ಟನಾದ ಕಲಿ ಶೂರ ಎನ್ನುತ್ತಾನೆ. ಹೀಗೆ ವರ್ಣಿಸಿಕೊಂಡಿದ್ದರೂ ಇಡೀ ಶಾಸನ ಕನ್ನಡ ಭಾಷೆಗೆ ತ್ರಿಪದಿ ಛಂದಸ್ಸಿನ ರೇಖೆ ಹಾಕಿ ಕೊಟ್ಟದ್ದಂತೂ ನಿಜ.

ಇದು ಉಡುಪಿ ಜಿಲ್ಲೆಯ ಉದ್ಯಾವರದ ಶಾಸನ ಅಳುಪ ರಾಜ ವಂಶಸ್ಥನಾದ ಪಾಂಡ್ಯನ ಮಗ ದೇವು ಎನ್ನುವವನ ಕಾಲದ್ದು. ಬಾದಾಮಿ ಚಾಲುಕ್ಯರ ಎರಡನೇ ಪೊಲೆಕೇಶಿಯ ಕಪ್ಪೆ ಅರಭಟ್ಟನ ಶಾಸನದ ಶಬ್ದಮಾಧುರ್ಯವನ್ನು ಹೊತ್ತಿರುವ ಶಾಸನ . ಹೇಳಿರುವ ವಿಧಾನ ಬೇರೆ ಆದರೂ ಅರ್ಥ ಮಾತ್ರ ಅದನ್ನೇ ಧ್ವನಿಸುತ್ತದೆ. ಕಪ್ಪೆ ಅರಭಟ್ಟನ ಶಾಸನ ಕಡೆದ ಶಿಲ್ಪಿಯೋ ಅಥವಾ ಆ ಶಾಸನದ ಶಾಸನ ಪಾಠವನ್ನು ರಚಿಸಿದ ಕವಿಯ ಅನುಕರಣೆಯನ್ನು ಮಾಡಲಿಕ್ಕಾಗಿ ಅದನ್ನೇ ಧ್ವನಿಸುವ ನುಡಿಗಟ್ಟನ್ನು ಹಾಕಲಾಗಿರ ಬಹುದು. ಅದೇನೇ ಇರಲಿ ಕರಾವಳಿಯ ಜನರಿಗೆ ಸಾಹಿತ್ಯದ ರುಚಿಯನ್ನಂತೂ ಉಣ ಬಡಿಸಿದೆ.

1 comment: