Search This Blog

Tuesday 13 June 2017

ವಿಕ್ರಮಾರ್ಜುನ ವಿಜಯದ ಕವಿಯ ಬನವಾಸಿ ಪ್ರೇಮ ಹೀಗಿದೆ. ಅವನ ಕುರಿತಾದ ಶಾಸನ ಜಿನವಲ್ಲಭನ ಶಾಸನ.

ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ (ಬ)ವನವಾಸಿ ದೇಶಮಂ

ವಿಕ್ರಮಾರ್ಜುನ ವಿಜಯದ ಕವಿಯ ಬನವಾಸಿ ಪ್ರೇಮ ಹೀಗಿದೆ. ಅವನ ಕುರಿತಾದ ಶಾಸನ ಜಿನವಲ್ಲಭನ ಶಾಸನ.

ತೆಂಕಣಗಾಳಿ ಸೋಂಕಿದೊಡಂ ಒಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ
ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆ ನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ || ೪-೩೦||

ಪಂಪ ಮೊದಲ ಸಹಸ್ರಮಾನದ ಅಂತ್ಯದಲ್ಲಿ ಬಂದ ಜೈನ ಕವಿ. ಕನ್ನಡ ನಾಡನ್ನು ಕನ್ನಡದ ಜನತೆಯನ್ನು ಕನ್ನಡದ ಮಣ್ಣಿನ ಸೊಬಗನ್ನು ಮತ್ತು ಇಲ್ಲಿನ ಪರಿಸರದ ಪ್ರತಿಯೊಂದು ಅಂಶವನ್ನು ತಾನು ಪ್ರೀತಿಸಿ ತನ್ನ ಕಾವ್ಯದಲ್ಲಿ ಅದನ್ನು ಕಟ್ಟಿಕೊಟ್ಟಿದ್ದನೆ. ಈ ಶಾಸನದಲ್ಲಿ ಪಂಪನನ್ನು "ಕವಿತಾಗುಣಾರ್ಣವ ಕೀರ್ತಿಯ ಮೂರ್ತಿ" ಎಂದುದಲ್ಲದೇ "ವಿಕ್ರಮಾರ್ಜ್ಜುನವಿಜಯಕ್ಕೆ ಧರ್ಮ್ಮವುರಂಮೆನ್ದು ಮದೀಯಮಿದೆನ್ದು ಕೀರ್ತ್ತಿಶಾಸನಮೆನೆ ಕೊಟ್ಟ ಶಾಸನದ ಪಂಪನ ನಂಬಿದುದೊನ್ದು ಜೈನಶಾಸನದ ನೆಗೞ್ತೆಯಂ" ಎಂದು ಪಂಪನು ಜಗದ್ವಿಖ್ಯಾತ ಕವಿಯಾಗಿದ್ದನು ಈ ಶಾಸನ ಹೇಳುತ್ತದೆ. "ಪಂಪಂಗೆಗೊಟ್ಟಾ ದ್ವಿಜಾವಸಥ ಗ್ರಾಮ" ಪಂಪನಿಗೆ ಒಂದು ಗ್ರಾಮವನ್ನೇ ಬಿಟ್ಟುಕೊಟ್ಟ ಬಗ್ಗೆ ಉಲ್ಲೇಖ ಇದೆ. ಇದು ಆಂಧ್ರ ಪ್ರದೇಶದ ಕರೀಂ ನಗರ ಜಿಲ್ಲೆಯ ಕುರ್ಕ್ಯಾಲ ಶಾಸನ. ಅಗ್ರಹಾರದ ಬೊಮ್ಮಲಮ್ಮಗುಟ್ಟದ ಮೇಲಿನ ಒಂದು ಬಂಡೆಯ ಮೇಲೆ ಬರೆದ ಶಾಸನ. ವೇಮುಲವಾಡ ಚಾಳುಕ್ಯ - ಮೂರನೆಯ ಅರಿಕೇಸರಿಯ ಕ್ರಿ.ಶ.10ನೇ ಶತಮಾನದ ಶಾಸನ.

ಭ್ರಾತದ್ಧರ್ಮ್ಮಪುರಂ ಪ್ರಯಾಮಕಿಮತೋ ಜೈನಾಭಿಷೇಕೋತ್ಸವ ಕ್ಷೀರಪ್ಲಾವಿತ ತುಂಗ ಶೃಂಗ ವೃಷಭಕ್ಷೋಣಿದ್ಧ್ರಮೀಕ್ಷಾಮಹೇ |
ಯಾತ್ರಾಯಾತ ಸಮಸ್ತ ಭವ್ಯಜನತಾ ಸನ್ಮಾನ ದಾನೋದ್ಯತಂ ಪಂಪಾರ್ಯ್ಯಾನುಜಮತ್ರ ಭೀಮತನುಜಂ ಸಮಕ್ತ್ವರತ್ನಾಕರಂ || 1 ||

ಗೀತಂ ಗಾತುಮನೇಕ ಭೇದ ಸುಭಗಂ ಕಾವ್ಯಾನಿ ಸೋಚ್ಚಾವಚಂ ವಾಚಾವಾಚಯಿತುಂ ಪ್ರಿಯಾಣಿವದಿತುಂ ಸಾಧೂಪಕರ್ತ್ತುಂ ಸತಾಂ |
ಭೋಗಾನ್ಸೇವಿತುಮಂಗನಾರಮಯಿತುಂ ಪೂಜಾಂ ವಿಧಾತುಂ ಜಿನೇ ಜಾನೀತೇ ಜಿನವಲ್ಲಭೞ್ಪರಮಿದಂ ಪಂಪಾಭಿಧಾನಾನುಜಃ || [2] ||

ಅಜಸ್ರ ಜಿನವನ್ದನಾಗತ ಮುನೀಶ್ವರ ಶ್ರಾವಕ ಪ್ರಜಾಸ್ತವರವ ಪ್ರತಿಧ್ವನಿತ ಶಬ್ದಕೋಳಾಹಳೈಃ |
ಅಧಿಷ್ಠಿತ ದಿಗಂಬರೋ ವೃಷಭಶೈಲ ಏಷಸ್ವಯಂ ಪರಾಂ ವದತಿ ವಾಚಕಾಭರಣ ಕೀರ್ತ್ತಿ ಮಾಕಳ್ಪತಃ || [3] ||

ಬಗೆಯಲಳುಂಬಮೀ ಬಗೆಯನಾರ್ಬ್ಬಗೆವೊರ್ಬ್ಬಗೆಗಾಸೆಯಲ್ತು ದಿಟ್ಟಿಗೆಪೊಲನಲ್ತು ನೀಳ್ದ
ಸಱಿಯೊಳ್ಜಿನಬಿಂಬಮನೀತನೀಗಳೆನ್ತಗೞಿಸಿದಪ್ಪೊನೆನ್ದು ಬಗೆವನ್ನೆವರಂ ಜಿನಬಿಂಬಮಲ್ಲಿ ತೊಟ್ಟಗೆ ನೆಗೞ್ದಿೞ್ದುವೇಂ ಚರಿತಮಚ್ಚರಿಯೋ ಜಿನವಲ್ಲಭೇನ್ದ್ರನಾ || [4] ||

ಇದು ಕವಿತಾಗುಣಾರ್ಣ್ಣವನ ಕೀರ್ತ್ತಿಯಮೂರ್ತ್ತಿವೊಲಾಗಿ ದಕ್ಷಿಣಾರ್ದ್ಧದ ವೃಷಭಾದ್ರಿಯಕ್ಕೆ ವೃಷಭೇಶ್ವರಬಿಂಬ ಸನಾಥಮೆಂಬಲಂಪೊದವೆ
ನಿಜದ್ವಿಜಾವಸಥ ಪರ್ವ್ವತಮಂ ಜಿನಚೈತ್ಯಮಾಗೆ ಮಾಡಿದ ಜಿನವಲ್ಲಭಂಗೆ ಜಿನವಲ್ಲಭನಪ್ಪುದುಮೊಂದು ಛೋದ್ಯಮೋ || [5] ||
ಚದುರಮಯ್ಮೆಯ ಸತ್ಕವಿತ್ವದ ಸನ್ದ ಪಂಪನ ತಮ್ಮನೋರ್ವ್ವದೆ ಪೊಗೞ್ತೆಯೆ ಬಾಜಿಸಲ್ಬರೆಯಲ್ಕವಿತ್ವದ ತತ್ವದೊಳ್ಪುದಿದು
ನೇರ್ಪ್ಪಡೆ ಪೇೞಲುರ್ವ್ವಿಗಪೂರ್ವ್ವಮಾಗಿರೆ ಬಲ್ಲೊನಪ್ಪುದಱಿನೊರ್ವ್ವನೆ ವಾಗ್ವಧೂವರವಲ್ಲಭಂ ಜಿನವಲ್ಲಭಂ || [6] ||
ವಿನುತ ಚಳುಕ್ಯವಂಶಪತಿ ಮಿಕ್ಕರಿಕೇಸರಿ ಸನ್ದ ವಿಕ್ರಮಾರ್ಜ್ಜುನವಿಜಯಕ್ಕೆ ಧರ್ಮ್ಮವುರಂಮೆನ್ದು ಮದೀಯಮಿದೆನ್ದು
ಕೀರ್ತ್ತಿಶಾಸನಮೆನೆ ಕೊಟ್ಟ ಶಾಸನದ ಪಂಪನ ನಂಬಿದುದೊನ್ದು ಜೈನಶಾಸನದ ನೆಗೞ್ತೆಯಂ ವೃಷಭಪರ್ವ್ವತಮನ್ತದು ತಾನೆ ಪೇೞದೇ || [7] ||
ಎಸಗಲ್ಗಾಳಿ ಪುಗಲ್ಪತಂಗಕಿರಣಂ ಸಾರಲ್ಮಿಗಂ ಪಾಱಲಾಗಸದೊಳ್ಪಕ್ಕಿಗಳಲ್ಲಿ ಸಲ್ಲವೆನಿಸಿರ್ೞ್ದೊನ್ಯೋದಯಂ ಧರ್ಮ್ಮದೊಳ್ಜಸಮಂ
ಪೊಂಪುೞಿಮಾಡೆ ಮೆಚ್ಚಿ ಹರಿಗಂ ಪಂಪಂಗೆಗೊಟ್ಟಾ ದ್ವಿಜಾವಸಥ ಗ್ರಾಮಮದೇನ್ನೆಗೞ್ತೆಯ ಕಳಾಪ ಗ್ರಾಮಮಂ ಪೋಲ್ತುದೋ || [8] ||
ಬರೆದುದೇ ತಾಂಬ್ರಶಾಸನಮದೇಯಮೆ ಧರ್ಮ್ಮವುರಂ ನೆಗೞ್ತೆವೆತ್ತರಿಗನ ಕೊಟ್ಟುದೇ ನೆಗೞ್ದ ಪಂಪನ ಪೆತ್ತುದೆ ಪೇೞಿಮೆನ್ದು ನೀಮ್ಮರುಳೆ
ಪಲರ್ಮ್ಮೆಯುಂ ಪಲಬರಂ ಬೆಸಗೊಳ್ಳದೆ ಪೋಗಿ ನೋಡ ಸುನ್ದರ ವೃಷಭಾಚಳೋನ್ನತ ಶಿಳಾತಳದೊಳ್ಬಬರೆದಕ್ಕರಂಗಳಂ || [9] || ||



No comments:

Post a Comment