Search This Blog

Monday 5 June 2017

ಸುರಚಾಪಂಬೋಲೆವಿದ್ಯುಲ್ಲತೆಗಳತೆಱವೋಲ್ಮಂಜುವೋಲ್ತೋಱಿಬೇಗಂ

ಇಂದ್ರನ ಬಿಲ್ಲಿನಂತೆ, ಮಿಂಚಿನಬಳ್ಳಿಗಳಂತೆ(ಕೋಲ್ಮಿಂಚಿನಂತೆ),

1. ಸುರಚಾಪಂಬೋಲೆವಿದ್ಯುಲ್ಲತೆಗಳತೆಱವೋಲ್ಮಂಜುವೋಲ್ತೋಱಿಬೇಗಂ
2. ಪಿರಿಗುಂಶ್ರೀರೂಪಲೀಲಾಧನವಿಭವಮಹಾರಾಶಿಗಳ್ನಿಲ್ಲವಾಗ್ರ್ಗಂ
3. ಪರಮಾರ್ತ್ಥಂಮೆಚ್ಚೆನಾನೀಧರಣಿಯುಳಿರವಾನೆನ್ದುಸನ್ಯಾಸನಂಗೆ
4. ಯ್ದುರುಸತ್ವನ್ನನ್ದಿಸೇನಪ್ರವರಮುನಿವರನ್ದೇವಲೋಕಕ್ಕೆ ಸನ್ದಾನ್

ಇಂದ್ರನ ಬಿಲ್ಲಿನಂತೆ, ಮಿಂಚಿನಬಳ್ಳಿಗಳಂತೆ(ಕೋಲ್ಮಿಂಚಿನಂತೆ), ಮಂಜಿನಂತೆ ತೋರಿ ಬೇಗನೇ ಕರಗಿ ಕಣ್ಮರೆಯಾಗುವ ಸಂಪತ್ತು, ಪಡೆದುಬಂದರೂಪ, ಲೀಲೆಗಳು, ಧನ ಕನಕಗಳು, ಈ ಎಲ್ಲಾ ವೈಭವಗಳು ಯಾರಿಗೂ ಶಾಶ್ವತವಲ್ಲ. ಪರಮಾರ್ಥವೇ ಶಾಶ್ವತವೆಂದು ಅದನ್ನು ಇಷ್ಟಪಟ್ಟು ನಾನು ಈ ಭೂಮಿಯಲ್ಲಿ ಇರುವುದು ಸರಿಯಲ್ಲ. ಎಂದು ಸಂನ್ಯಾಸನವಿಧಿಯನ್ನು ಆಚರಿಸಿ(ಜೈನ ಸಂಪ್ರದಾಯದಂತೆ) ನಂದಿಸೇನಪ್ರವರ ಎನ್ನುವ ಮುನಿಯು ಮರಣವನ್ನು ಸ್ವೀಕರಿಸಿದನು. ಎನ್ನುವುದು ಈ ಶಾಸನದ ಆಶಯ. ನಶ್ವರವಾದ ಜಗತ್ತಿನ ಬಾಹ್ಯ ಬಂಧಗಳನ್ನು ತೊಡೆದು ತಾನು ಆಂತರ್ಯದಿಂದ ತಾನು ಮುಕ್ತಿಯನ್ನು ಕಾಣುವುದನ್ನು ವಿವರಿಸಲಾಗಿದೆ. ಇದು ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣದ ಶ್ರವಣಬೆಳಗೊಳದ ಚಿಕ್ಕಬೆಟ್ಟದಲ್ಲಿ ಬಸದಿಯೊಂದರ ಈಶಾನ್ಯದಲ್ಲಿ ಕಾಣ ಸಿಗುವ ಶಾಸನ. ಇದರ ಕಾಲಮಾನ ಸುಮಾರು ೭ನೇ ಶತಮಾನ.

No comments:

Post a Comment