Search This Blog

Wednesday 24 May 2017

ಬಿಳಿಯ ಪಂಚೆಯನ್ನು ಧರಿಸಿ ಉತ್ತರೀಯದೊಂದಿಗೆ ಶೋಭಿಸುತ್ತಾ ಕೈಯಲ್ಲಿ ಧಭೆಯ ಚಾಪೆಯನ್ನು ಹಿಡಿದು ತಲೆಯಲ್ಲಿ ಗೋಪಾದದಷ್ಟಿರುವ ಶಿಖೆಯನ್ನು ಧರಿಸಿದ ವಿದ್ಯಾರ್ಥಿಗಳ ಸಮೂಹವನ್ನು ನೋಡುತ್ತಿದ್ದರೆ ಅದು ಕೈಲಾಸದಲ್ಲಿರುವ ಶಿವನ ಮಂದಿರದಲ್ಲಿ ಸಾಕ್ಶಃಆತ್ ಶಿವನೇ ಕಂಡಂತಭಾವ ಮನಸ್ಸಿನಲ್ಲಿ ಮೂಡುತ್ತಿತ್ತು. ಶುಭ್ರವಾದ ಸ್ವಚ್ಚವಾದ ಮನಸ್ಸು ಮತ್ತು ಕಲಿಕೆ ಯನ್ನು ನೋಡುತ್ತಿದ್ದರೆ ಇಡೀ ನಾಲಂದಾ ನಗರಿಯೇ ಮಂದ ಹಾಸದೊಂದಿಗೆ ವಿಜ್ರಂಭಿಸುತ್ತಿರುವಲ್ಲಿ ಶತ್ರು ಸೈನ್ಯ ನುಗ್ಗಿದರೆ ಎದುರಿಸಬಲ್ಲ ಸಾಮರ್ಥ್ಯದ ತರಬೇತಿಯೂ ನಡೆಯುತ್ತಿತ್ತು. ಗೋಡೆಗಳಮೇಲೆ ಅಲ್ಲಲ್ಲಿ ಚಿತ್ತಾರಗಳ ಆಕರ್ಷಕ ಜೋಡಣೆ ಇತ್ತು. ಎಲ್ಲಾ ವಿಧದ ವಿದ್ವಜ್ಜನರ ಸಮೂಹವೇ ಅಲ್ಲಿತ್ತು. ಒಂದೆಡೆ ದೇವವಾಣಿಯ ಕಲರವವಾದರೆ ಇನ್ನೊಂದೆಡೆ ಕಲಾವಿದರ ಕಲಾ ಪ್ರಾಕಾರಗಳ ಪ್ರದರ್ಶನ, ಛಾತ್ರ ಸಮೂಹಗಳ ದಂಡು ನೋಡಿದರೆ ಛಾತ್ರಾಲಯವು ದೇವಾಲಯ ಎನ್ನುವಂತಿತ್ತು. ಇದು ಬೇರೆಲ್ಲೂ ಅಲ್ಲ ನಮ್ಮ ಪ್ರಾಚೀನ ವಿದ್ಯಾಪೀಠ ನಾಲಂದಾದ ವರ್ಣನೆ. ಇದು ಯಶೋವರ್ಮದೇವನು ಹಾಕಿಸಿದ ನಾಲಂದಾ ದಲ್ಲಿರುವ ಶಿಲಾಶಾಸನ.
 ಯಾಸಾವೂರ್ಜಿತ ವೈರಿ ಭೂ ಪ್ರವಿಗಲದ್ದಾನಾಂಬುಪಾನೋಲ್ಲಸನ್ಮಾದ್ಯೋದ್ಭೃಂಗಕರೀಂದ್ರಕುಂಭದಲನಪ್ರಾಪ್ತಶ್ರಿಯಾಂ ಭೂಭುಜಾಮ್ |
ನಾಲಂದಾ ಹಸತೀವ ಸರ್ವನಗರೀಃ ಶುಭ್ರಾಭ್ರಗೌರಸ್ಫುರಚ್ಚೈತ್ಯಾಂಶುಪ್ರಕಾರೈಃ ಸದಾಗಮಕಲಾವಿಖ್ಯಾತ ವಿದ್ವಜ್ಜನಾ || ೪ ||
ಯಸ್ಯಾಮಂಬುಧರಾ ವಲೇಹಿ ಶಿಖರ ಶ್ರೇಣೀ ವಿಹಾರವಲೀ ಮಾಲೇವೋರ್ಧ್ವವಿರಾಜಿನೀ ವಿರಚಿತಾ ಛಾತ್ರಾ ಮನೋಜ್ಞಾ ಭುವಃ |
ನಾನಾರತ್ನ ಮಯೂಖಜಾಲಖಚಿತ ಪ್ರಾಸಾದ ದೇವಾಲಯಾ ಸದ್ವಿದ್ಯಾಧರಸಂಘರಮ್ಯವಸತಿರ್ಧತ್ತೇ ಸುಮೇರೋಃ ಶ್ರಿಯಮ್ || ೫ ||


No comments:

Post a Comment