ಆತಕೂರಿನ ಮಣಲರನ ನಾಯಿಯಮೇಲಿನ ಪ್ರೀತಿ
ಉರಿದಿದಿರಾಂತು ಬಂದ ಚೋಳರಾಜಾದಿತ್ಯನನ್ನು ಅಷ್ಟೇ ಕೆಚ್ಚೆದೆಯಿಂದ ಬಲಂಗಳನಟ್ಟಿ ತಟ್ಟಿ ಮುಟ್ಟಿ ಸೋಲಿಸಿದ ಕಾಳಗವದು. ಅಮೋಘವರ್ಷನ ಮಾಂಡಲಿಕನಾದ ಕಚ್ಚೆಗ ಕನ್ನರದೇವನು ಚೋಳರಾಜಾದಿತ್ಯನ ಮೇಲೆ ದಂಡೆತ್ತಿ ಹೋದಾಗ ಬೂತುಗ ಹಾಗೂ ಆತನ ಸೇವಕ ಮಣಾಲರನೂ ವೀರಾವೇಷದಿಂದ ಹೋರಾಡಿದರು. ಆಗ ಕನ್ನರನು ಇಬ್ಬರನ್ನು ಅತ್ಯಾದರದಿಂದ ಗೌರವಿಸಿದನು. ಬೂತುಗನೂ ಸಹ ತನ್ನ ಸೇವಕನಾದ ಮಣಾಲರನನ್ನು ಬಾಳ್ಗಳ್ಚು(ರಕ್ತ ಸಿಕ್ತ ಖಡ್ಗವನ್ನು ತೊಳೆದು ಪುರಸ್ಕರಿಸುವ ಗೌರವ) ಕೊಟ್ಟು ಗೌರವಿಸಿದನು. ಇದು ಈ ಶಾಸನದಲ್ಲಿ ಬರುವ ವಿಷಯವಾಗಿದ್ದರೆ ಇದಕ್ಕಿಂತಲೂ ಭಿನ್ನವಾದ ಇನ್ನೊಂದು ಪ್ರಸಂಗ ಬರುತ್ತದೆ. ವೀರನಾದ ಈ ಮಣಾಲರನಿಗೆ ಸಾಕು ಪ್ರಾಣಿ ಎಂದರೆ ಎಲ್ಲಿಲ್ಲದ ಅಪಾರ ಪ್ರೀತಿ. ಯುದ್ಧದಲ್ಲಿ ಗೆದ್ದು ಬಂದ ವೀರ ಮಣಾಲರನಲ್ಲಿ ಬೂತುಗನು ನಿಗೇನು ಬೇಕೋ ಅದನ್ನು ಕೇಳು ಎಂದು ಹೇಳುತ್ತಾನೆ. ಆಗ ಮಣಾಲರನು ತನಗೆ ಸಾಕುಪ್ರಾಣಿಗಳೆಂದರೆ ಇಷ್ಟ ಆದುದರಿಂದ ನನ್ನಂತೆಯೇ ವೀರತನವುಳ್ಳ 'ಕಾಳಿ' ನಾಯಿಯನ್ನು ಬೇಡಿಕೊಂಡು ಪಡೆದುಕೊಳ್ಳುತ್ತಾನೆ. ಹೀಗಿರುತ್ತಾ ಆ ನಾಯಿಯು ಒಮ್ಮೆ ದೊಡ್ದ ಹಂದಿಯೊಡನೆ ಹೋರಾಡುತ್ತದೆ ಆಗ ಹಂದಿಯನ್ನು ಕೊಂದು ತಾನೂ ಸಾಯುತ್ತದೆ. ಆಗ ಮಣಾಲರನು ಆ ನಾಯಿಯ ವೀರಾವೇಶದ ಸಾವಿನ ನೆನಪಿಗಾಗಿ ಒಂದು ವೀರಗಲ್ಲನ್ನು ನೆಟ್ಟು. ಆ ವೀರಗಲ್ಲಿನ ಪೂಜೆಗಾಗಿ ಹೊಲವನ್ನು ಉಂಬಳಿಯಾಗಿ ಬಿಡುತ್ತಾನೆ.
ಇದು ಮಂಡ್ಯ ಜಿಲ್ಲೆಯ ಆತಕೂರಿನ ಶಾಸನ ರಾಷ್ಟ್ರಕೂಟ ೩ನೆ ಕೃಷ್ಣ ಮತ್ತು ಬೂತುಗರ ಶಾಸನ. ಚಲ್ಲೇಶ್ವರ ದೇವಾಲಯದ ಮುಂದಿರುವ ಕಲ್ಲಿನಲ್ಲಿ ಬರೆಯಲಾಗಿದೆ ಇದು ಸುಮಾರು ಕ್ರಿ ಶ ೯೫೦ ನೆ ಇಸವಿಯದ್ದು.
ಡೆ ದಯೆಯ ಮೆರೆವೊ(ಳ್) ಎಂಬ ಕಾಳಿಯಂ ದಯೆಗೆಯ್ಯೆಂದು ಕೊಣ್ಡನಾ ನಾಯ[ಂ] ಕೇಳಲೆ ನಾಡ ಬೆಳತೂರ ಪಡು
ವಣ ದೆಸೆಯ ಮೊರದಿಯೊಳ್ಪಿರಿ[ದುಂ ಪ]ಂದಿಗೆ ವಿಟ್ಟೊಡೆ ಪಂದಿಯುಂ ನಾಯುಂ ಒಡ ಸತ್ತುವದರ್ಕ್ಕೆ
ಯತ್ತುಕೂರೊಳ್ಚಲ್ಲೇಶ್ವರದ ಮುಂದೆ ಕಲ್ಲನ್ನಡಿಸಿ ಪಿರಿಯ ಕೆರೆಯ ಕೆಳಗೆ ಮಳ್ತಿಕಾಳಂಗದೊಳಿರ್ಕ್ಕಂಡುಗ
ಮಣ್ನ ಕೊಟ್ಟರಾ
ಕದನೈಕ ಶೂದ್ರಕ ......ಬೂತುಗ
ಉರಿದಿದಿರಾಂತ ಚೋಳ ಚತುರಂಗ ಬಲಂಗಳನಟ್ಟಿ ಮುಟ್ಟಿ ತಳ್ತಿರಿವೆಡೆಗೊರ್ವರಪ್ಪೊಡಂ ಇದಿರ್ಚ್ಚುವ
ಗಣ್ಡರನಾಂಪೆವೆನ್ದು ಪೊಟ್ಟಾಲಿಸುವ ಬೀ(ವೀ)ರರಂ ನೆರೆಯೆ ಕೋಣೆ(ಣ)ಮೆ ಚೋಳನೆ ಸ(ಶ)ಕ್ತಿಯಾಗೆ ತಳ್ತಿರಿದುದನಾವೆ(ಮೆ)
ಕಣ್ಡೆವೆನೆ ಮೆಚ್ಚದೊರಾ ರ್ಸ್ಸಾಗರ ತ್ರಿಣೇತ್ರಂ ನರಪತಿ ಬೆನ್ನೊಳಿಳಿದೊನಿದಿರಂತುದು ವೈರಿಸಮೂದಂ ಇಲ್ಲಿ
ಮಚ್ಚರಿಸುವರೆಲ್ಲರುಂ ಸೆರಗುವಾಳ್ದಪೊರಿಂತಿರೆರೆನ್ದು ಸಿಂಗದಂತಿರೆ ಹರಿ ಬೀ(ವೀ)ರಲಕ್ಷ್ಮಿ ನೆರವಾಗಿರೆ ಚೋ
ಳ[ನ] ಕೋಟೆಯೆಂಬ ಸಿಂಧುರದ ಶಿರಾಗ್ರಮಂ ಬಿರಿಯೆ ಪಾಯಿದಂ ಕದನೈಕ ಸೂ(ಶೂ)ದ್ರಕಂ
ಉರಿದಿದಿರಾಂತು ಬಂದ ಚೋಳರಾಜಾದಿತ್ಯನನ್ನು ಅಷ್ಟೇ ಕೆಚ್ಚೆದೆಯಿಂದ ಬಲಂಗಳನಟ್ಟಿ ತಟ್ಟಿ ಮುಟ್ಟಿ ಸೋಲಿಸಿದ ಕಾಳಗವದು. ಅಮೋಘವರ್ಷನ ಮಾಂಡಲಿಕನಾದ ಕಚ್ಚೆಗ ಕನ್ನರದೇವನು ಚೋಳರಾಜಾದಿತ್ಯನ ಮೇಲೆ ದಂಡೆತ್ತಿ ಹೋದಾಗ ಬೂತುಗ ಹಾಗೂ ಆತನ ಸೇವಕ ಮಣಾಲರನೂ ವೀರಾವೇಷದಿಂದ ಹೋರಾಡಿದರು. ಆಗ ಕನ್ನರನು ಇಬ್ಬರನ್ನು ಅತ್ಯಾದರದಿಂದ ಗೌರವಿಸಿದನು. ಬೂತುಗನೂ ಸಹ ತನ್ನ ಸೇವಕನಾದ ಮಣಾಲರನನ್ನು ಬಾಳ್ಗಳ್ಚು(ರಕ್ತ ಸಿಕ್ತ ಖಡ್ಗವನ್ನು ತೊಳೆದು ಪುರಸ್ಕರಿಸುವ ಗೌರವ) ಕೊಟ್ಟು ಗೌರವಿಸಿದನು. ಇದು ಈ ಶಾಸನದಲ್ಲಿ ಬರುವ ವಿಷಯವಾಗಿದ್ದರೆ ಇದಕ್ಕಿಂತಲೂ ಭಿನ್ನವಾದ ಇನ್ನೊಂದು ಪ್ರಸಂಗ ಬರುತ್ತದೆ. ವೀರನಾದ ಈ ಮಣಾಲರನಿಗೆ ಸಾಕು ಪ್ರಾಣಿ ಎಂದರೆ ಎಲ್ಲಿಲ್ಲದ ಅಪಾರ ಪ್ರೀತಿ. ಯುದ್ಧದಲ್ಲಿ ಗೆದ್ದು ಬಂದ ವೀರ ಮಣಾಲರನಲ್ಲಿ ಬೂತುಗನು ನಿಗೇನು ಬೇಕೋ ಅದನ್ನು ಕೇಳು ಎಂದು ಹೇಳುತ್ತಾನೆ. ಆಗ ಮಣಾಲರನು ತನಗೆ ಸಾಕುಪ್ರಾಣಿಗಳೆಂದರೆ ಇಷ್ಟ ಆದುದರಿಂದ ನನ್ನಂತೆಯೇ ವೀರತನವುಳ್ಳ 'ಕಾಳಿ' ನಾಯಿಯನ್ನು ಬೇಡಿಕೊಂಡು ಪಡೆದುಕೊಳ್ಳುತ್ತಾನೆ. ಹೀಗಿರುತ್ತಾ ಆ ನಾಯಿಯು ಒಮ್ಮೆ ದೊಡ್ದ ಹಂದಿಯೊಡನೆ ಹೋರಾಡುತ್ತದೆ ಆಗ ಹಂದಿಯನ್ನು ಕೊಂದು ತಾನೂ ಸಾಯುತ್ತದೆ. ಆಗ ಮಣಾಲರನು ಆ ನಾಯಿಯ ವೀರಾವೇಶದ ಸಾವಿನ ನೆನಪಿಗಾಗಿ ಒಂದು ವೀರಗಲ್ಲನ್ನು ನೆಟ್ಟು. ಆ ವೀರಗಲ್ಲಿನ ಪೂಜೆಗಾಗಿ ಹೊಲವನ್ನು ಉಂಬಳಿಯಾಗಿ ಬಿಡುತ್ತಾನೆ.
ಇದು ಮಂಡ್ಯ ಜಿಲ್ಲೆಯ ಆತಕೂರಿನ ಶಾಸನ ರಾಷ್ಟ್ರಕೂಟ ೩ನೆ ಕೃಷ್ಣ ಮತ್ತು ಬೂತುಗರ ಶಾಸನ. ಚಲ್ಲೇಶ್ವರ ದೇವಾಲಯದ ಮುಂದಿರುವ ಕಲ್ಲಿನಲ್ಲಿ ಬರೆಯಲಾಗಿದೆ ಇದು ಸುಮಾರು ಕ್ರಿ ಶ ೯೫೦ ನೆ ಇಸವಿಯದ್ದು.
ಸಾಕು ಪ್ರಾಣಿ ಕಾಳಿಯ ಮೇಲೆ ಪ್ರೀತಿ
ಶ್ರೀಮತ್ ಮಣಲರತ[ಂಗ]ನುವರದೊಳ್ಮೆಚ್ಚಿ ಬೇಡಿಕೊಳ್ಳೆನ್ದೊಡೆ ದಯೆಯ ಮೆರೆವೊ(ಳ್) ಎಂಬ ಕಾಳಿಯಂ ದಯೆಗೆಯ್ಯೆಂದು ಕೊಣ್ಡನಾ ನಾಯ[ಂ] ಕೇಳಲೆ ನಾಡ ಬೆಳತೂರ ಪಡು
ವಣ ದೆಸೆಯ ಮೊರದಿಯೊಳ್ಪಿರಿ[ದುಂ ಪ]ಂದಿಗೆ ವಿಟ್ಟೊಡೆ ಪಂದಿಯುಂ ನಾಯುಂ ಒಡ ಸತ್ತುವದರ್ಕ್ಕೆ
ಯತ್ತುಕೂರೊಳ್ಚಲ್ಲೇಶ್ವರದ ಮುಂದೆ ಕಲ್ಲನ್ನಡಿಸಿ ಪಿರಿಯ ಕೆರೆಯ ಕೆಳಗೆ ಮಳ್ತಿಕಾಳಂಗದೊಳಿರ್ಕ್ಕಂಡುಗ
ಮಣ್ನ ಕೊಟ್ಟರಾ
ಕದನೈಕ ಶೂದ್ರಕ ......ಬೂತುಗ
ಉರಿದಿದಿರಾಂತ ಚೋಳ ಚತುರಂಗ ಬಲಂಗಳನಟ್ಟಿ ಮುಟ್ಟಿ ತಳ್ತಿರಿವೆಡೆಗೊರ್ವರಪ್ಪೊಡಂ ಇದಿರ್ಚ್ಚುವ
ಗಣ್ಡರನಾಂಪೆವೆನ್ದು ಪೊಟ್ಟಾಲಿಸುವ ಬೀ(ವೀ)ರರಂ ನೆರೆಯೆ ಕೋಣೆ(ಣ)ಮೆ ಚೋಳನೆ ಸ(ಶ)ಕ್ತಿಯಾಗೆ ತಳ್ತಿರಿದುದನಾವೆ(ಮೆ)
ಕಣ್ಡೆವೆನೆ ಮೆಚ್ಚದೊರಾ ರ್ಸ್ಸಾಗರ ತ್ರಿಣೇತ್ರಂ ನರಪತಿ ಬೆನ್ನೊಳಿಳಿದೊನಿದಿರಂತುದು ವೈರಿಸಮೂದಂ ಇಲ್ಲಿ
ಮಚ್ಚರಿಸುವರೆಲ್ಲರುಂ ಸೆರಗುವಾಳ್ದಪೊರಿಂತಿರೆರೆನ್ದು ಸಿಂಗದಂತಿರೆ ಹರಿ ಬೀ(ವೀ)ರಲಕ್ಷ್ಮಿ ನೆರವಾಗಿರೆ ಚೋ
ಳ[ನ] ಕೋಟೆಯೆಂಬ ಸಿಂಧುರದ ಶಿರಾಗ್ರಮಂ ಬಿರಿಯೆ ಪಾಯಿದಂ ಕದನೈಕ ಸೂ(ಶೂ)ದ್ರಕಂ
No comments:
Post a Comment