Search This Blog

Wednesday 24 May 2017

ಕೊಲ್ಲೂರು ದೇವಾಲಯದಲ್ಲಿರುವ ಫಲಶೃತಿ

ಇಂದ್ರಃ ಪೃಚ್ಛತಿ ಚಾಂಡಾಲೀ ಕಿಮಿದಂ ಪಚ್ಯತೇ ತ್ವಯಾ |
ಶ್ವಮಾಂಸಂ ಸುರಯಾ ಸಿಕ್ತಂ ಕಪಾಲೇನ ಚಿತಾಗ್ನಿನಾ ||
ದೇವ ಬ್ರಾಹ್ಮಣ ವಿತ್ತಾನಾಂ ಬಲಾದಪಹರಂತಿ ಯೇ |
ತೇಷಾಂ ಪಾದ ರಜೋಭೀತ್ಯಾ ಚರ್ಮಣಾ ವಿಹಿತಂ ಮಯಾ ||
೧೪೮೨ನೇ ಇಸವಿಯಲ್ಲಿ ಈಗಿನ ಉಡುಪಿ ಜಿಲ್ಲೆಯ ಕೊಲ್ಲೂರು ದೇವಾಲಯದಲ್ಲಿರುವ ಶಾಸನದಲ್ಲಿರುವ ಶ್ಲೋಕವಿದು.
ಇಂದ್ರನು ಚಾಂಡಾಲಿಯೊಬ್ಬಳನ್ನು ಕೇಳುತ್ತಾನೆ. ಏನು ಬೇಯಿಸುತ್ತಿರುವೆ ಚಾಂಡಾಲಿ ? ಎಂದು ಅದಕ್ಕೆ ಚಾಂಡಾಲಿಯು ಹೇಳುತ್ತಾಳೆ:



ಹೆಂಡವನ್ನು ಬೆರೆಸಿದ ನಾಯಿಯ ಮಾಂಸವನ್ನು ಹೆಣದ ಬೆಂಕಿಯಮೇಲೆ ತಲೆಬುರುಡೆಯಲ್ಲಿ ಬೇಯಿಸುತ್ತಿದ್ದೇನೆ. ದೇವರ ಮತ್ತು ಬ್ರಾಹ್ಮಣರ ಸೊತ್ತನ್ನು ಅಪಹರಿಸಿದ ಪಾಪಿಯ ಪಾದದ ಧೂಳು ಈ ಪಾತ್ರೆಯೊಳಗೆ ಬಿದ್ದೀತೆಂಭ ಭಯದಿಂದ ಅದಕ್ಕೆ ಚರ್ಮವನ್ನು ಮುಚ್ಚಿರುವೆ ಎಂದು ಹೇಳುತ್ತಾಳೆ.

No comments:

Post a Comment