Search This Blog

Thursday 25 May 2017

ಏಕಾಸ್ತ್ಯೇಕಶಿಲಾಖ್ಯಾತ್ರ ನಗರೀ ಯಾ ಗರೀಯಸೀ

ಹನುಮಕೊಂಡದ ನಿರೋಷ್ಟ್ಯ ಕಾವ್ಯ ಶಾಸನವು ಕಾವ್ಯಾಲಂಕಾರ ಅಭ್ಯಾಸಿಗಳಿಗೆ ಅತ್ಯುಪಯುಕ್ತ ಸರಕನ್ನು ಕೊಡಬಲ್ಲದು, ಕಾವ್ಯಾತ್ಮಕವಾದ ಈ ಶಾಸನದಲ್ಲಿ ಅರ್ಥ ಮತ್ತು ಶಬ್ದಾಲಂಕಾರವನ್ನು ಬಳಸಲಾಗಿದೆ."ಏಕಾಸ್ತ್ಯೇಕಶಿಲಾಖ್ಯಾತ್ರ ನಗರೀ ಯಾ ಗರೀಯಸೀ " ಏಕ ಶಿಲಾ ನಗರಿ ಎಂದು ಕರೆಯಲ್ಪಡುತ್ತಿದ್ದ ಆಂಧ್ರ ದೇಶದಲ್ಲಿ ಖಂಡರಿಸಿರುವ ಶಾಸನವಿದು. ಈ ಕೆಳಗಿನ ಶ್ಲೋಕವನ್ನು ಶಬ್ದಾಲಂಕಾರವನ್ನು ಬಳಸಿ ರಚಿಸಲಾಗಿದೆ. ಪ್ರಿಯಕರನ ಪ್ರೀತಿಯ ಕುರಿತಾಗಿ ಹೇಳು ಈ ಶ್ಲೋಕದಲ್ಲಿ "ಪ್ರೀತಿಗೆ ಪ್ರಿಯಕರನೇ ಕಾರಣ ಮತ್ತು ಅಂತಹ ಪ್ರೀತಿಯನ್ನು ಪ್ರಿಯಕರನಲ್ಲಿ ಉಂಟು ಮಾಡು " ಎನ್ನುವ ಅರ್ಥವನ್ನು ಧ್ವನಿಸುತ್ತದೆ.

ಕಾಂತಯಾ ಘ್ನಂತಿ ಯತ್ಕಾಂತಾಃ ಕಾಂತಾನಾಂ ಹೃದಯಂ ದೃಶಾ |
ಕಾಂತಯಾ ಘ್ನಂತಿ ಯತ್ಕಾಂತಾಃ ಕಾಂತಾನಾಂ ಹೃದಯಂ ದೃಶಾ||೨೮||

ಎಂತೆಂತಹ ಅದ್ಭುತವಾದ ರಚನೆಗಳಿವೆ - ಚಕೋರಂಗೆ ಚಂದ್ರಮನ ಬೆಳಕಿನಾ ಚಿಂತೆ ............ನಾರಿಯರು ಚಂದ್ರನ ಬೆಳದಿಂಗಳ ಬರುವಿಕೆಗಾಗಿ ಕಾಯುತ್ತಿದ್ದರು ..........
ಲಲಾಟೇನಾರ್ದ್ಧ ಚಂದ್ರೇಣ ಕೃಸ್ತ್ನ ಚಂದ್ರೈಸ್ತದಾನನೈಃ |
ಯದಂಗನಾಃ ಕಲಾಸಕ್ತೀರ್ನಿರ್ದಿಶಂತಿ ನಿಜಾರ್ಜಿತಾಃ ||
ಈ ಶಾಸನವು ಸುಮಾರು ೧೩ನೇ ಶತಮಾನಕ್ಕೆ ಸರಿ ಹೊಂದುತ್ತಿದ್ದು, ಆಂಧ್ರವನ್ನು ಏಕಶಿಲಾ ನಗರಿ ಎನ್ನುವುದಾಗಿ ಹೇಳಲಾಗಿದೆ.


No comments:

Post a Comment